ಅಂಬ್ಲಮೊಗರು: ಪ್ರವಾದಿ ಸಂದೇಶ ಕಾರ್ಯಕ್ರಮ
ಉಳ್ಳಾಲ, ಜ.2: ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ವತಿಯಿಂದ ಪ್ರವಾದಿ ಮುಹಮ್ಮದ್(ಸ)ರವರ ಜೀವನ ಮತ್ತು ಸಂದೇಶದ ಪರಿಚ ಯದ ಪ್ರಯುಕ್ತ ಅಂಬ್ಲಮೊಗರಿನ ಸರಕಾರಿ ಹಿ.ಪ್ರಾ. ಮತ್ತು ಪ್ರೌಢ ಶಾಲೆಗೆ ಅಗತ್ಯವುಳ್ಳ ವಸ್ತು ಕಪಾಟನ್ನು ನೀಡ ಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಅಬೂಸಾಲಿ ಅಧ್ಯಕ್ಷತೆ ವಹಿಸಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಕ್, ಜ.ಇ.ಹಿಂದ್ ಉಳ್ಳಾಲ ಶಾಖೆಯ ಉಪಾಧ್ಯಕ್ಷ ಅಬ್ದುರ್ರಹಿೀಮ್, ತೊಕ್ಕೊಟ್ಟಿನ ಅಲ್ ಫುರ್ಕಾನ್ ಅರಬಿಕ್ ಇನ್ಸ್ಟಿಟ್ಯೂಟ್ನ ಅಧ್ಯಕ್ಷ ಇಸ್ಹಾಕ್ ಹಸನ್, ಜ.ಇ. ಹಿಂದ್ ಉಳ್ಳಾಲ ಶಾಖೆಯ ಕಾರ್ಯದರ್ಶಿ ಅಬ್ದುಲ್ ಕರೀಮ್, ಜ.ಇ.ಹಿಂದ್ ಉಳ್ಳಾಲದ ಜೊತೆ ಕಾರ್ಯದರ್ಶಿ ಅಹ್ಮದ್ ಶರೀಫ್, ಮುಖ್ಯ ಶಿಕ್ಷಕ ಜಗದೀಶ್ ಶೆಟ್ಟಿ, ಶಿಕ್ಷಕ ಅಹ್ಮದ್ ಕುಂಞಿ ಉಪಸ್ಥಿತರಿದ್ದರು
Next Story