ವಿದ್ಯುತ್ ಆಘಾತದಿಂದ ಮೃತ್ಯು
ಕಾರ್ಕಳ, ಡಿ.2: ಅಡಿಕೆ ಮರದಿಂದ ಅಡಿಕೆ ಕೊಯ್ಯುತ್ತಿರುವಾಗ ಪಕ್ಕದಲ್ಲೇ ಹಾದುಹೋದ ವಿದ್ಯುತ್ ಹೈಟೆನ್ಶನ್ ವೈರ್ ತಾಗಿ ವಿದ್ಯುತ್ ಆಘಾತದಿಂದ ತೀವ್ರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಡಿ.1ರ ಸಂಜೆ 7:20ಕ್ಕೆ ಮೃತಪಟ್ಟಿದ್ದಾರೆ.
ಮೃತರನ್ನು ಬೆಳ್ತಂಗಡಿ ಗ್ರಾಮ ಕುವೆಟ್ಟುನ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಇವರು ನ.25ರಂದು ಕಾರ್ಕಳ ತಾಲೂಕು ಸೂಡಾ ಗ್ರಾಮದ ರಿತೇಶ್ ಶೆಟ್ಟಿ ಎಂಬವರ ಮನೆಗೆ ಕೂಲಿಕೆಲಸಕ್ಕೆ ಹೋಗಿದ್ದಾಗ ಅಡಿಕೆ ಕೊಯ್ಯಲು ಮರ ಏರಿದ್ದಾಗ ಈ ಘಟನೆ ನಡೆದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story