ಪಟ್ಟೋರಿ: ನೀರಿಗೆ ಬಿದ್ದು ವ್ಯಕ್ತಿ ಮೃತ್ಯು
ಕೊಣಾಜೆ,ಡಿ.3: ಕೊಣಾಜೆ ಗ್ರಾಮದ ಪಟ್ಟೋರಿ ಎಂಬಲ್ಲಿ ತೋಟದಲ್ಲಿದ್ದ ಬಾವಿಗೆ ಬಿದ್ದು ವ್ಯಕ್ತಿಯೋರ್ವರು ಧಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಕೊಣಾಜೆ ಕಾಟುಕೋಡಿಯ ದಿ.ವೆಂಕಪ್ಪ ಮೂಲ್ಯ ಎಂಬವರ ಪುತ್ರ ಕೃಷ್ಣಪ್ಪ(42) ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕೂಲಿ ಕೆಲಸಗಾರನಾಗಿದ್ದ ಇವರು ಪಟ್ಟೋರಿಯ ಪತ್ನಿ ಮನೆ ಸಮೀಪವೇ ಮನೆ ಮಾಡಿಕೊಂಡು ವಾಸವಾಗಿದ್ದರು. ಗುರುವಾರ ರಾತ್ರಿ ಮನೆಗೆ ಬಂದು ಮಲಗಿದ್ದ ಇವರು ಶುಕ್ರವಾರ ಬೆಳಿಗ್ಗೆಯಿಂದ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಸಂಬಂಧಿಕರು ಸೇರಿ ಹುಡುಕಾಡಿದರೂ ಇವರ ಪತ್ತೆ ಇರಲಿಲ್ಲ. ಶನಿವಾರ ಮುಂಜಾನೆ ಕೃಷ್ಣಪ್ಪರ ಶವವು ಪಟ್ಟೋರಿಯ ತೋಟದ ನಡುವಿನಲ್ಲಿದ್ದ ಬಾವಿಯಲ್ಲಿ ಪತ್ತೆಯಾಗಿದೆ. ಇವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story