ಡಿ.9 : ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಉದ್ಘಾಟನೆ
ಮಂಗಳೂರು, ಡಿ.7 : ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಉದ್ಘಾಟನೆ ಈ ತಿಂಗಳ 9ರಂದು ಸಂಜೆ 6.30ಕ್ಕೆ ನಗರದ ಓಷನ್ ಪರ್ಲ್ನಲ್ಲಿ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಆಗಮಿಸಲಿದ್ದಾರೆ.
ಯೆನಪೋಯ ವಿಶ್ವವಿದ್ಯಾನಿಲಯದ ಕುಲಪತಿ ಅಲ್ಹಜ್ ವೈ.ಅಬ್ದುಲ್ಲಾ ಕುಞ್ಞೆ ಅಧ್ಯಕ್ಷತೆ ವಹಿಸಲಿರುವರು.
ವಿಶೇಷ ಆಹ್ವಾನಿತರಾಗಿ ಅಲ್ಹಾಜ್ ಟ್ರೇಡಿಂಗ್ ಎಲ್ಎಲ್ ಆಡಳಿತ ನಿರ್ದೇಶಕ ಸಯ್ಯದ್ ಅಬ್ದುಲ್ ಖಾದರ್ (ಬಾಪು), ಟೀಕೇಸ್ ಇಂಟೀರಿಯರ್ ಸೊಲ್ಯೂಶನ್ಸ್ನ ಆಡಳಿತ ನಿರ್ದೇಶಕ ಟಿ.ಕೆ.ಉಮರ್ ಭಾಗವಹಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಹಿದೀನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ.ಆರ್.ಲೋಬೊ, ಮೊಹಿದ್ದೀನ್ ಬಾವ, ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜೀವನ್ ಸಲ್ಡಾನಾ, ನಗರಪಾಲಿಕೆ ಜಂಟಿ ಆಯುಕ್ತ ಗೋಕುಲ್ದಾಸ್ ನಾಯಕ್ ಭಾಗವಹಿಸುವರು ಎಂದು ಬಿಸಿಸಿಐ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಸಿಸಿಐ ಉಪಾಧ್ಯಕ್ಷ ಹಾಜಿ ಝಕರಿಯಾ ಜೋಕಟ್ಟೆ, ಪ್ರಧಾನ ಕಾರ್ಯದರ್ಶಿ ಮಹ್ಮದ್ ಇಮ್ತರಿಯಾಜ್ ಭಾಗವಹಿಸುವರು.
ಬೆಂಗಳೂರು, ಮಂಗಳೂರು ಹಾಗೂ ವಿದೇಶಗಳ ಅನೇಕ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಪ್ರಕಟಣೆ ಹೇಳಿದೆ.