ಮಂಗಳೂರು ಪೊಲೀಸರಿಂದ ಮುಂಬೈ ೇಸ್ಬುಕ್ ಸಿಬ್ಬಂದಿ ವಿಚಾರಣೆ
ಮಂಗಳೂರು, ಡಿ.8: ಸಾಮಾಜಿಕ ಜಾಲತಾಣ ೇಸ್ಬುಕ್ನಲ್ಲಿ ಇತ್ತೀಚೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಕುರಿತ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಅಸಹಕಾರ ತೋರಿದ ಫೇಸ್ಬುಕ್ ಸಂಸ್ಥೆಯ ಸಿಬ್ಬಂದಿಯನ್ನು ಮಂಗಳೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮಂಗಳೂರು ಪೊಲೀಸರು ಮುಂಬೈಯಲ್ಲಿರುವ ೇಸ್ಬುಕ್ ಕಚೇರಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಇದಕ್ಕೆ ಮುಂಬೈ ಪೊಲೀಸರು ಕೂಡ ಸಹಕಾರ ನೀಡಿದ್ದಾರೆ.
ಆರೋಪಿಗಳ ಪತ್ತೆಗೆ ೇಸ್ಬುಕ್ ಸಂಸ್ಥೆ ಅಸಹಕಾರ ತೋರಿತ್ತು. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಮತ್ತು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಜಂಟಿಯಾಗಿ ಮುಂಬೈಯಲ್ಲಿರುವ ೇಸ್ಬುಕ್ ಕಚೇರಿಗೆ ಭೇಟಿ ನೀಡಿ ಪ್ರಕರಣದ ವಿಚಾರಣೆ ಮುಂದುವರಿಸಿದ್ದಾರೆ.
ಎಸಿಪಿ ವೆಲೆಂಟೈನ್ ಡಿಸೋಜ, ಪೊಲೀಸ್ ಇನ್ಸ್ಪೆೆಕ್ಟರ್ಗಳಾದ ಶಾಂತರಾಂ, ಶಿವಪ್ರಕಾಶ್ ಮುಂಬೈಗೆ ತೆರಳಿದ ಪೊಲೀಸ್ ತಂಡದಲ್ಲಿದ್ದರು.
Next Story