ಶಿರ್ವ ಚರ್ಚ್ನ ಸೈಂಟ್ ಅಂತೋನಿ ಮೂರ್ತಿ ಧ್ವಂಸ
ಶಿರ್ವ, ಡಿ.11: ಶಿರ್ವ ಆರೋಗ್ಯ ಮಾತೆ ಚರ್ಚ್ನ ಮುಂಭಾಗದಲ್ಲಿರುವ ಸೈಂಟ್ ಅಂತೋನಿ ಮೂರ್ತಿಯನ್ನು ದುಷ್ಕರ್ಮಿಗಳು ಧ್ವಂಸಗೈದ ಘಟನೆ ಇಂದು ನಡೆದಿದೆ.
ಬೆಳಗ್ಗೆ 9.30ರಿಂದ ನಡೆದ ವಿಶೇಷ ಪ್ರಾರ್ಥನೆಯ ಬಳಿಕ ಮಧ್ಯಾಹ್ನ 12ಗಂಟೆ ಸುಮಾರಿಗೆ ಚರ್ಚ್ಗೆ ಬೀಗ ಹಾಕಿ ಎಲ್ಲರು ತೆರಳಿದ್ದರು. ಅದರ ನಂತರ ಅಂದರೆ ಮಧ್ಯಾಹ್ನ 1ರಿಂದ 3ಗಂಟೆ ಮಧ್ಯಾವಧಿಯಲ್ಲಿ ದುಷ್ಕರ್ಮಿ ಗಳು ಚರ್ಚ್ ಎದುರಿನ ಬಲಭಾಗದಲ್ಲಿದ್ದ ಸೈಂಟ್ ಲಾರೆನ್ಸ್ ಮೂರ್ತಿಯನ್ನು ತೆಗೆದು ನೆಲದಲ್ಲಿರಿಸಿದ್ದು, ಎಡಭಾಗದಲ್ಲಿದ್ದ ಸೈಂಟ್ ಅಂತೋನಿ ಮೂರ್ತಿ ಯನ್ನು ಕೆಳಕ್ಕೆ ಹಾಕಿ ಪುಡಿಗೈದಿದ್ದಾರೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಆಗ ಮಿಸಿ ತನಿಖೆ ನಡೆಸಿದೆ.
ಕಾಪು ಶಾಸಕ ವಿನಯ ಕುಮಾರ್ ಸೊರಕೆ ಚರ್ಚ್ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ವಿಲ್ಸನ್ ರೊಡಿಗ್ರಸ್ ಹಾಜರಿದ್ದರು.
Next Story