ಪ್ರವಾದಿ ಚರ್ಯೆ ಪಾಲಿಸಿ ಐಕ್ಯತೆಯಿಂದ ಬಾಳೋಣ: ಖಾಝಿ
ತೋಡಾರಿನಲ್ಲಿ ‘ಪ್ರವಾದಿ ಸ್ನೇಹ.. ಸ್ವರಾಜ ಸ್ನೇಹ’ ಮೀಲಾದುನ್ನಬಿ ಆಚರಣೆ
ಮಂಗಳೂರು, ಡಿ. 27: ಎಸ್ವೈಎಸ್ ದ.ಕ. ಜಿಲ್ಲಾ ವತಿಯಿಂದ ಮಂಗಳವಾರ ತೋಡಾರು ಬದ್ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ‘ಪ್ರವಾದಿ ಸ್ನೇಹ.. ಸ್ವರಾಜ ಸ್ನೇಹ’ ಎಂಬ ಘೋಷಣೆಯೊಂದಿಗೆ ನಡೆದ ಮೀಲಾದುನ್ನಬಿ ಆಚರಣೆ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರವಾದಿ ಚರ್ಯೆಯನ್ನು ಪಾಲಿಸಿ ಐಕ್ಯತೆಯಿಂದ ಬಾಳೋಣ ಎಂದರು.ಶೈಖುನಾ ಕುಮರಂಪುತ್ತೂರ್ ಉಸ್ತಾದ್ ಅನುಸ್ಮರಣೆ ಸಮಿತಿಯ ಅಧ್ಯಕ್ಷ ಬಿ. ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿಯವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಅಬ್ದುಲ್ ಅಜೀಝ್ ದಾರಿಮಿ ಚೊಕ್ಕಬೆಟ್ಟು, ಅನೀಸ್ ಕೌಸರಿ, ಸಲೀಂ ಫೈಝಿ ಮಾತನಾಡಿದರು.
ಜಗದೀಶ್ ಅಧಿಕಾರಿ, ಮಿಥುನ್ ರೈ, ಪ್ರಕಾಶ್ ಶೆಟ್ಟಿ, ಡಿ.ಎ.ಉಸ್ಮಾನ್ ಏರ್ ಇಂಡಿಯಾ, ಕೆ.ಎಂ.ಶರೀಫ್ ಫೈಝಿ ಕಡಬ, ಐ.ಮೊದಿನಬ್ಬ ಹಾಜಿ ಮಂಗಳೂರು, ಅಬ್ದುರ್ರಹ್ಮಾನ್ ಹಾಜಿ ಮೂಡಬಿದ್ರೆ, ಹಾಸ್ಕೊ ಅಬ್ದುರ್ರಹ್ಮಾನ್ ಹಾಜಿ, ಎ. ಎಚ್. ನೌಶಾದ್ ಹಾಜಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಹಕೀಂ ವಿಟ್ಲ, ಪ್ರಕಾಶ್ ಆಳ್ವ ಮೆಜಾರ್ಗುತ್ತು, ರಮೇಶ್ ಶೆಟ್ಟಿ ಮರಿಯಡ್ಕ, ದಿವಾಕರ ಶೆಟ್ಟಿ ತೋಡಾರ್ , ತೋಡಾರ್ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಂ.ಎ.ಇಕ್ಬಾಲ್, ಸಬೀರ್ ಅಹ್ಮದ್ ಮೂಡಬಿದ್ರೆ, ರಫೀಕ್ ದಾರಿಮಿ ತೋಡಾರ್, ಇಸ್ಮಾಯೀಲ್ ಯಮಾನಿ, ಮುಸ್ತಫಾ ಯಮಾನಿ ಮೂಡಬಿದ್ರೆ ಮೆಟ್ರೊ ಸಾಹುಲ್ ಹಮೀದ್ ಹಾಜಿ ಗುರುಪುರ, ಯೂಸುಫ್ ಗುತ್ತು ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಅಬ್ದುಲ್ಲತೀಫ್ ಹಾಜಿ ಮದರ್ ಇಂಡಿಯಾ ಸ್ವಾಗತಿಸಿದದರು. ಕಾರ್ಯದರ್ಶಿ ಕೆ. ಎಲ್. ಉಮರ್ ದಾರಿಮಿ ವಂದಿಸಿದರು. ಮಸ್ತಫಾ ಫೈಝಿ ಕಿನ್ಯ ಕಾರ್ಯಕ್ರಮ ನಿರೂಪಿಸಿದರು. ಮೌಲೂದ್ ನೇತೃತ್ವವನ್ನು ಅತ್ರಾಡಿ ಖಾಝಿ, ಅಬೂಬಕರ್ ಹಾಜಿ ವಹಿಸಿದ್ದರು. ಮಖಾಂ ಝಿಯಾರತ್ಗೆ ಸಲೀಂ ಫೈಝಿ ನೇತೃತ್ವ ನೀಡಿದರು.