ಭಟ್ಕಳ : ಪತ್ರಕರ್ತ ಎಂ.ಆರ್.ಮಾನ್ವಿ ಗೆ ಸನ್ಮಾನ
ಭಟ್ಕಳ , ಡಿ.28 : ತರಬಿಯತ್ ಎಜ್ಯುಕೇಶನ್ ಸೂಸೈಟಿಯು ಬುಧವಾರ ಜರಗಿದ ಶಾಲಾ ವಾರ್ಷೀಕ ಸಮಾರಂಭದಲ್ಲಿ ಭಟ್ಕಳದ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಇಲ್ಲಿನ ಸಾಹಿಲ್ಅನ್ ಲಾಯಿನ್ ಮೀಡಿಯಾ ಸಂಸ್ಥೆಯ ನಿರ್ದೇಶಕ ಖಮರ್ ಸಾದಾ, ಭಟ್ಕಳೀಸ್.ಕಾಂ ನ ರಿಝ್ಞೆನ್ ಗಂಗೋಳಿ, ಈಟಿವಿ ಉರ್ದು ವರದಿಗಾರ ಸಾಲಿಕ್ ಬರ್ಮಾವರ್ ನದ್ವಿ, ಹರ್ಪಲ್ ಆನ್ ಲಾಯಿನ್ ಸಂಪಾದಕ ಅಬ್ರಾರುಲ್ ಹಖ್ ಖತೀಬಿ ಹಾಗೂ ವಾರ್ತಾಭಾರತಿ ವರದಿಗಾರ ಎಂ.ಆರ್.ಮಾನ್ವಿಯವರನ್ನು ಸನ್ಮಾನಿಸಿ ಗೌರವಿಸಲಾಯತು.
ಈ ಸಂದರ್ಭದಲ್ಲಿ ಡಾ.ಎಸ್.ಎಂ.ಸೈಯ್ಯದ್ ಖಲೀಲುರ್ರಹ್ಮಾನ್ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ ಗಫೂರ್, ಸ್ಕೂಲ್ ಬೋರ್ಡ್ ಅಧ್ಯಕ್ಷ ಕಾದಿರ್ ಮೀರಾ ಪಟೇಲ್., ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್, ಮಾಜಿ ಅಧ್ಯಕ್ಷ ಇಕ್ಬಾಲ್ ಇಕ್ಕೇರಿ, ಆಡಳಿತ ಮಂಡಳಿ ಸದಸ್ಯರಾದ ಡಾ.ಮುಹಮ್ಮದ್ ಹನೀಫ್ ಶಬಾಬ್, ಮೌಲಾನ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ ಮತ್ತಿತರರು ಉಪಸ್ಥಿತಿತರಿದ್ದರು.