ಯುವಕ ನಾಪತ್ತೆ: ದೂರು
ಮುಲ್ಕಿ, ಡಿ.31: ಕಿನ್ನಿಗೋಳಿ ಸಮೀಪದ ಕಿಲೆಂಜೂರು ನಿವಾಸಿಯೋರ್ವರು ನಾಪತ್ತೆಯಾದ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾಗಿರುವ ಯುವಕನನ್ನು ಕಿಲೆಂಜೂರು ಕಂಬಳಿ ಮನೆ ನಿವಾಸಿ ಉಮೇಶ್ ಶೆಟ್ಟಿ(29)ಎಂದು ಗುರುತಿಸಲಾಗಿದೆ. ಉಮೇಶ್ ಶೆಟ್ಟಿ ಪಣಂಬೂರಿನ ಟ್ರಾನ್ಸ್ಪೋರ್ಟ್ ಉದ್ಯಮದಲ್ಲಿ ಪಾಟ್ನರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪ್ರತೀ ದಿನ ಪಣಂಬೂರಿಗೆ ಬಸ್ನಲ್ಲಿ ಹೋಗಿ ಬರುತ್ತಿದ್ದ ಈತ ದಿನದ ಹಿಂದೆ ಪಕ್ಷಿಕೆರೆಯಲ್ಲಿ ಬಸ್ಸಿನಿಂದ ಇಳಿದು ಅಪರಿಚಿತ ವಾಹನದಲ್ಲಿತೆರಳಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story