ಬೆಳುವಾಯಿ: ವ್ಯಕ್ತಿಯ ಕೊಲೆ ಯತ್ನ
ಮೂಡುಬಿದಿರೆ, ಜ.6: ಕಬ್ಬಿಣದ ಗೇಟನ್ನು ಕಳವುಗೈದ ಆರೋಪದ ಬಗ್ಗೆ ಪ್ರಶ್ನಿಸಲು ಹೋದ ವ್ಯಕ್ತಿಯನ್ನು ಲಾರಿ ಚಲಾಯಿಸಿ ಕೊಲೆಗೆ ಯತ್ನಿಸಿರುವ ಘಟನೆ ಬೆಳುವಾಯಿ ಎಂಬಲ್ಲಿ ನಡೆದಿದ್ದು, ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.
ಬೆಳುವಾಯಿ ಗ್ರಾಮದ ಕಾನ ನಿವಾಸಿ ಗೋಪಾಲ್ ದೇವಾಡಿಗ ಎಂಬವರ ಮಗ ಉಮಾನಾಥ್ ದೇವಾಡಿಗ ಎಂಬವರಿಗೆ ಸೇರಿದ ಆಸ್ತಿಯಲ್ಲಿದ್ದ ಕಬ್ಬಿಣದ ಗೇಟನ್ನು ಕಿರಣ್ ಮತ್ತಿತರರು ಸೇರಿ ಕಳವುಗೈದಿದ್ದರು ಎನ್ನಲಾಗಿದೆ. ಇದನ್ನು ಉಮಾನಾಥ್ ಪ್ರಶ್ನಿಸಲು ಕಿರಣ್ ಮನೆಗೆ ತೆರಳಿದ್ದರು. ಈ ಸಂದರ್ಭ ಕಿರಣ್ ತನ್ನ ಟೆಂಪೊ ಚಲಾಯಿಸಿ ಉಮಾನಾಥ್ರನ್ನು ಕೊಲೆಗೈಯಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಉಮಾನಾಥ್ ಚರಂಡಿಗೆ ಹಾರಿ ತಪ್ಪಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಆರೋಪಿ ಕಿರಣ್, ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಅವರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Next Story