ಖಾದಿ ಕ್ಯಾಲೆಂಡರ್ನಿಂದ ಗಾಂಧಿ ಚಿತ್ರ ತೆರವು: ರಾಷ್ಟ್ರೀಯ ಭಾವನೆಗೆ ಧಕ್ಕೆ ಎಂದ ಮೊಯ್ಲಿ
ಮಂಗಳೂರು, ಜ.14: ಖಾದಿ ಗ್ರಾಮೋದ್ಯಗ ಆಯೋಗ(ಕೆವಿಐಸಿ)ದ ಕ್ಯಾಲೆಂಡರ್ನಿಂದ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ತೆಗುದು ಆ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕಿರುವುದು ತಪ್ಪು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಿಸಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧೀಜಿಯವರ ಭಾವಚಿತ್ರ ತೆರವಿನಿಂದ ರಾಷ್ಟ್ರೀಯ ಭಾವನೆಗೆ ಧಕ್ಕೆ ಆಗಿದೆ ಎಂದರು.
ಬೇಕಿದ್ದರೆ ಗಾಂಧೀಜಿಯವರ ಜೊತೆ ಮೋದಿಯವರ ಭಾವಚಿತ್ರ ಹಾಕಿಕೊಳ್ಳಲಿ. ಅದು ಬಿಟ್ಟು ಗಾಂಧಿ ಚಿತ್ರ ತೆಗೆಸಿರುವುದು ಸರಿಯಲ್ಲ ಎಂದರು.
Next Story