ಹಾವು ಕಡಿದು ವ್ಯಕ್ತಿ ಮೃತು್ಯ
ಕಾರ್ಕಳ, ಜ.17: ಹಾವು ಹಿಡಿಯುವ ಹವ್ಯಾಸ ಹೊಂದಿದ್ದ ವ್ಯಕ್ತಿಯೊಬ್ಬರು ಹಾವು ಕಡಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಬೈಲೂರು ಬಳಿ ನಡೆದಿದೆ.
ಮೃತರನ್ನು ಪೆರ್ವಾಜೆ ಪತೊ ್ತಂಜಿಕಟ್ಟೆ ನಿವಾಸಿ ಆನಂದ ಅಂಚನ್(68) ಎಂದು ಗುರುತಿಸಲಾಗಿದೆ. ಇವರು ಬೈಲೂರು ಬಳಿ ಹಾವು ಹಿಡಿಯುತ್ತಿದ್ದಾಗ ಹಾವು ಅವರ ಕೈಗೆ ಕಚ್ಚಿತ್ತು. ಪರಿಣಾಮ ಅಸ್ವಸ್ಥಗೊಂಡ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story