ಮುಂಬೈನ ಹೊಟೇಲ್ ನೌಕರ ಮೂಡುಬಿದಿರೆ ಹೊಟೇಲ್ನಲ್ಲಿ ನೇಣಿಗೆ ಶರಣು
ಮೂಡುಬಿದಿರೆ,ಜ.23 : ಮುಂಬೈನ ಹೊಟೇಲೊಂದರಲ್ಲಿ ನೌಕರನಾಗಿ ದುಡಿಯುತ್ತಿದ್ದ ಯುವಕನೋರ್ವ ಮೂಡುಬಿದಿರೆಯ ಇಂಟರ್ನ್ಯಾಷನಲ್ ಹೊಟೇಲ್ ಪಂಚರತ್ನದ ರೂಮೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕಿನ ಸಾವ್ಯ ಗ್ರಾಮದ ಗುಜ್ಜೊಟ್ಟು ನಿವಾಸಿ ಗುಲಾಬಿ ದೇವಾಡಿಗ ಎಂಬವರ ಪುತ್ರ ಸುಂದರ ದೇವಾಡಿಗ (35ವ)ಆತ್ಯಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಮುಂಬೈನಲ್ಲಿ ಹೊಟೇಲ್ನಲ್ಲಿ ನೌಕರನಾಗಿ ದುಡಿಯುತ್ತಿದ್ದು, ಭಾನುವಾರದಂದು ಮೂಡುಬಿದಿರೆಗೆ ಆಗಮಿಸಿ ಹೊಟೇಲ್ನ ರೂಮಿನಲ್ಲಿ ತಂಗಿದ್ದರು. "ನನ್ನ ಸಾವಿಗೆ ನಾನೇ ಕಾರಣ"ಎಂದು ಡೆತ್ನೋಟನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಬೆಳಗ್ಗೆ ಹೊಟೇಲ್ ರೂಮ್ ಬಾಯ್ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story