ಇಂದು ಕಂಬಳ ನಿಷೇಧದ ವಿರುದ್ಧ ತುರವೇ ಪ್ರತಿಭಟನೆ
ಮಂಗಳೂರು, ಜ.23: ರಾಜ್ಯದಲ್ಲಿ ಕಂಬಳವನ್ನು ನಿಷೇಸಿರುವುದರ ವಿರುದ್ಧ ನಡೆಯುವ ಪ್ರತಿಭಟನೆ ತುಳುನಾಡು ರಕ್ಷಣಾ ವೇದಿಕೆ ಬೆಂಬಲ ಸೂಚಿಸಿದೆ. ಅಲ್ಲದೆ ಜ.24ರಂದು ದ.ಕ. ಜಿಲ್ಲಾಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿಂದು ತುಳುನಾಡು ರಕ್ಷಣಾವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ತಿಳಿಸಿದ್ದಾರೆ.
ಕಂಬಳವನ್ನು ತಮಿಳುನಾಡಿನ ಜಲ್ಲಿಕಟ್ಟು ಆಚರಣೆಗೆ ಹೋಲಿಸಿ ನಿಷೇಸಲು ಆಗ್ರಹಿಸುತ್ತಿರುವ ಪೀಪಲ್ ಾರ್ ಎಥಿಕಲ್ ಟ್ರೀಟ್ಮೆಂಟ್ ಾರ್ ಅನಿಮಲ್ಸ್ (ಪೇಟಾ) ಸಂಘಟನೆಯು ಇದೇ ರೀತಿ ವರ್ತಿಸಿದರೆ ಅದರ ವಿರುದ್ಧವೂ ಹೋರಾಟ ನಡೆಸಲು ತುಳುನಾಡು ರಕ್ಷಣ ವೇದಿಕೆ ಸಿದ್ಧವಿದೆ ಎಂದರು.
ತುರವೇ ಮುಖಂಡರಾದ ಮೋಹನ್ ದಾಸ್ ರೈ, ಶ್ರೀಕಾಂತ ಸಾಲ್ಯಾನ್ ಉಪಸ್ಥಿತರಿದ್ದರು.
Next Story