ಮೂಡುಬಿದಿರೆ: ಪ್ರತಿಭಾವಂತ ವಿದ್ಯಾರ್ಥಿನಿ ಪೂರ್ಣಿಮಾಗೆ ಸನ್ಮಾನ
ಮೂಡುಬಿದಿರೆ, ಫೆ.17: ಶ್ರೀ ಕ್ಷೇತ್ರ ಬನ್ನಡ್ಕ ವರ್ಷಾವಧಿ ಜಾತ್ರೋತ್ಸವದ ದಿನದಂದು ಸ್ಥಳೀಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಳೆದ ಸಾಲಿನಲ್ಲಿ ಉಡುಪಿ ಜಿಲ್ಲೆಗೆ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನಿಯಾದ ಮುರತಂಗಡಿ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಎಸ್. ಕೋಟ್ಯಾನ್, ನವೀನ್ ಅಂಬೂರಿ, ಹರೀಶ್ ಹೆಗ್ಡೆ, ಅಂಗನವಾಡಿ ಶಿಕ್ಷಕಿ ಭಾರತಿ, ಜಗತ್ಪಾಲ ಎಸ್. ಹೆಗ್ಡೆ, ಯುವರಾಜ್ ಜೈನ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸ ಮುಂದುವರಿಸಲಾಗದೇ ದುಡಿಮೆಗೆ ತೊಡಗಿದ್ದ ಈ ವಿದ್ಯಾರ್ಥಿನಿಯ ವಿದ್ಯಾಭ್ಯಾಸದ ಸಂಪೂರ್ಣ ಖರ್ಚುವೆಚ್ಚಗಳನ್ನು ಭಾಸ್ಕರ ಎಸ್. ಕೋಟ್ಯಾನ್ ನೀಡುವುದಾಗಿ ಭರವಸೆ ನೀಡಿದ್ದಾರೆ. ವಿದ್ಯಾರ್ಥಿನಿಯ ಹೆತ್ತವರಾದ ಮಹಾಬಲ ಮೂಲ್ಯ ಹಾಗೂ ಗೀತಾ ಮೂಲ್ಯ ಉಪಸ್ಥಿತರಿದ್ದರು.
Next Story