ಮಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತನ ಕೊಲೆ
ಮಂಗಳೂರು, ಫೆ.19: ಕುಡಿದ ಮತ್ತಿನಲ್ಲಿದ್ದ ಮಾದಕ ವ್ಯಸನಿಯನ್ನು ಸ್ನೇಹಿತರು ಹತ್ಯೆ ಮಾಡಿರುವ ಘಟನೆ ಮಂಗಳೂರಿನ ಮರೋಳಿಯಲ್ಲಿ ನಡೆದಿದೆ.
ಪ್ರತಾಪ್ ಎಂಬಾತ ಕೊಲೆಗೀಡಾದವನು. ಕುಡಿದ ಮತ್ತಿನಲ್ಲಿ ಮಾಡಿಕೊಂಡ ಜಗಳ ವಿಕೋಪಕ್ಕೆ ತಿರುಗಿದಾಗ ಸ್ನೇಹಿತರಾದ ಸಾಗರ್, ದಿನೇಶ್, ಮಿಥುನ್ ಪ್ರತಾಪ್ ನನ್ನು ಕಡಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇವರೆಲ್ಲಾ ಗಾಂಜಾ ವ್ಯಾಪಾರದಲ್ಲಿ ತೊಡಗಿದ್ದರು.
ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story