ಮೂಡುಬಿದಿರೆಯಲ್ಲಿ ಹರತಾಳದ ಕರಪತ್ರ ಹಂಚಿ ಬಂದ್ ಗೆ ಒತ್ತಾಯ
ಮೂಡುಬಿದಿರೆ, ಫೆ.24: ಮೂಡುಬಿದಿರೆಯಲ್ಲಿ ಅಂಗಡಿ, ಕಚೇರಿಗಳಿಗೆ ತೆರಳಿರುವ ಸಂಘಪರಿವಾರದ ಕಾರ್ಯಕರ್ತರು ಶನಿವಾರ(ಫೆ.25) ಬಂದ್ ನಡೆಸುವಂತೆ ಒತ್ತಾಯಿಸಿ 'ಹರತಾಳ'ದ ಕರಪತ್ರ ಹಂಚುತ್ತಿರುವುದು ಕಂಡುಬಂತು.
ಇದರಿಂದಾಗಿ ಸಾರ್ವಜನಿಕರು ಹಾಗೂ ಅಂಗಡಿ ಕಚೇರಿಗಳ ಮಾಲಕರು ಗೊಂದಲಕ್ಕೀಡಾದರು.
ಬಂದ್ ಇದೆಯೋ ಇಲ್ಲವೋ ಎಂಬ ಆತಂಕ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಉಂಟಾಗಿದೆ.
ಮೂಡುಬಿದಿರೆ ಪೇಟೆಯಾದ್ಯಂತ ಶುಕ್ರವಾರ ಸಂಜೆಯ ವೇಳೆಗೆ ಕರಪತ್ರ ಹಂಚಿ 'ನಾಳೆ ಅಂಗಡಿ ಬಂದ್' ಎಂದು ಕಾರ್ಯಕರ್ತರು ಸೂಚನೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
Next Story