ಬಂದ್ ಕರೆ ಸುಪ್ರೀಂ ಕೋರ್ಟ್ ತೀರ್ಪಿಗೆ ಅವಮಾನ: ಪೂಜಾರಿ
ಮಂಗಳೂರು, ೆ.24: ಹಿಂದೂಪರ ಸಂಘಟನೆಗಳು ೆ.25ರಂದು ದ.ಕ. ಜಿಲ್ಲಾ ಬಂದ್ಗೆ ಕರೆ ನೀಡುವ ಮೂಲಕ ಬಂದ್ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪಿಗೆ ಅವಮಾನ ಮಾಡಿವೆ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.
ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಸುಪ್ರೀಂ ಕೋರ್ಟ್ಗೆ ಒಡ್ಡಿರುವ ಸವಾಲನ್ನು ಸ್ವೀಕರಿಸಿ ಸ್ಪಷ್ಟವಾದ ತೀರ್ಪು ನೀಡಬೇಕಾದ ಸಮಯ ಎದುರಾಗಿದೆ ಎಂದರು.
ರಾಜ್ಯ ಸರಕಾರದ ಸಚಿವರಿಂದ ಕಾಂಗ್ರೆಸ್ ಹೈಕಮಾಂಡ್ಗೆ ನೂರಾರು ಕೋಟಿ ರೂ. ನೀಡಿರುವ ವಿವರಗಳಿವೆ ಎನ್ನಲಾದ ಡೈರಿ ಪ್ರಕರಣದ ಮೂಲಕ ಎಲ್ಲ ಪಕ್ಷಗಳ ಮಾನವನ್ನು ದೇಶದೆದುರು ಬಿಜೆಪಿ ಹರಾಜು ಹಾಕಿದೆ ಎಂದು ದೂರಿದರು.
ಕಾಂಗ್ರೆಸ್ನ ಅರುಣ್ ಕುವೆಲ್ಲೊ, ಕಳ್ಳಿಗೆ ತಾರನಾಥ ಶೆಟ್ಟಿ, ಅಜಿತ್ ಕುಮಾರ್, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಎತ್ತಿನ ಹೊಳೆ ಯೋಜನೆ ನಿಲ್ಲಿಸಿದಿದ್ದರೆ ಉಪವಾಸ ಸತ್ಯಾಗ್ರಹ!
ಎತ್ತಿನಹೊಳೆ ಹಣ ದೋಚಲು ಮಾಡಿರುವ ಯೋಜನೆ ಮಾತ್ರವಲ್ಲದೆ, ಉತ್ತರ ಕರ್ನಾಟಕದ ಮಹಾದಾಯಿ ಯೋಜನೆಯಂತೆ ಕರಾವಳಿಯನ್ನು ಬರಗಾಲ ಉಂಟು ಮಾಡಲು ಈ ಯೋಜನೆಯ ಮೂಲಕ ಸಂಚು ನಡೆದಿದೆ ಎಂದು ಜನಾರ್ದನ ಪೂಜಾರಿ ಆರೋಪಿಸಿದರು. ರಾಜ್ಯ ಸರಕಾರ ಹಾಗೂ ಕೇಂದ್ರದ ಪರಿಸರ ಇಲಾಖೆ ಮಧ್ಯೆ ಪ್ರವೇಶಿಸಿ ತಕ್ಷಣ ಯೋಜನೆಯನ್ನು ನಿಲ್ಲಿಸದಿದ್ದಲ್ಲಿ, ಕುದ್ರೋಳಿ ದೇವಸ್ಥಾನದಲ್ಲಿ ತಾನು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದ ಅವರು, ದಿನಾಂಕವನ್ನು ಮುಂದೆ ತಿಳಿಸುವುದಾಗಿ ಪ್ರತಿಕ್ರಿಯಿಸಿದರು.