ಗುತ್ತಿಗಾರು, ಪಂಜ ಬಂದ್, ಸುಬ್ರಹ್ಮಣ್ಯ ಬಂದ್ ಇಲ್ಲ
ಸುಬ್ರಹ್ಮಣ್ಯ, ೆ.25: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿ ವಿರೋಸಿ ಸಂಘಪರಿವಾರಗಳು ಶನಿವಾರ ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಅಂಗಡಿಮುಂಗಟ್ಟುಗಳು, ಸರಕಾರಿ ಬಸ್ಗಳು ಎಂದಿನಂತೆ ಕಾರ್ಯಚರಿಸುತ್ತಿದ್ದವು. ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕೂಡ ಬೆಳಗ್ಗಿನಿಂದಲೇ ಅಕವಾಗಿತ್ತು.
ಶುಕ್ರವಾರ ಶಿವರಾತ್ರಿ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ್ದ ಭಕ್ತರು ಅಕ ಸಂಖ್ಯೆಯಲ್ಲಿ ಶನಿವಾರ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ದೇವರ ದರುಶನ ಪಡೆದರು. ಶಾಲಾಕಾಲೇಜುಗಳು ಎಂದಿನಂತೆ ತೆರೆದಿದ್ದವು. ಸುಬ್ರಹ್ಮಣ್ಯ ಬಿಜೆಪಿ ವತಿಯಿಂದ ಕಾರ್ಯಕರ್ತರು ರಥಬೀದಿ ಹಾಗೂ ಕುಮಾಧಾರಾ ದ್ವಾರದ ಬಳಿ ಪ್ರತಿಭಟನೆ ನಡೆಸಿದರು. ಸುಬ್ರಹ್ಮಣ್ಯ ಅಲ್ಲದೇ ಪೊಲೀಸ್ ಠಾಣಾ ಸರಹದ್ದಿನಲ್ಲಿ ಹೆಚ್ಚುವರಿ ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Next Story