ಕೊಂಕಣಿ ಅಕಾಡಮಿಯ ‘ಶಿಖರ’ ಸ್ಮರಣಿಕೆ ಲೋಕಾರ್ಪಣೆ
ಮಂಗಳೂರು, ೆ. 25: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಅವರ ಅಧಿಕಾರಾವಧಿಯ (2014 ೆ.26ರಿಂದ 2017 ೆ.25) ವಿವಿಧ ಕಾರ್ಯ ಚಟುವಟಿಕೆಗಳ ದಾಖಲೀಕರಣ ಮಾಡಿದ ಸ್ಮರಣಿಕೆ ‘ಶಿಖರ’ವನ್ನು ಮಂಗಳೂರಿನ ಬಿಷಪ್ ಅ.ವಂ. ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಬಿಡುಗಡೆಗೊಳಿಸಿದರು. ಕೊಡಿಯಾಲ್ಬೈಲ್ನಲ್ಲಿರುವ ಬಿಷಪ್ಸ್ ಹೌಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಂಕಣಿಗರು ಮಾತೃಭಾಷೆ ಯಲ್ಲೇ ಮಾತನಾಡುವ ಮೂಲಕ ಕೊಂಕಣಿ ಸಂಸ್ಕೃತಿ ಯನ್ನು ಉಳಿಸುವ ಕೆಲಸ ಮಾಡಬೇಕು ಎಂದರು. ಕ್ರೈಸ್ತ ಧರ್ಮಪ್ರಾಂತ ನಡೆಸುತ್ತಿರುವ ಕೆಲವು ಶಾಲೆಗಳಲ್ಲಿ ಕೊಂಕಣಿಯನ್ನು ತೃತೀಯ ಭಾಷೆಯಾಗಿ ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ ಶಾಲೆಗಳಲ್ಲಿಯೂ ಕೊಂಕಣಿ ಕಲಿಕೆ ಆರಂಭಿಸಲು ಪ್ರೋತ್ಸಾಹ ನೀಡಲಾಗು ವುದು ತಿಳಿಸಿದರು. ಕೊಂಕಣಿ ಭಾಷೆಗೆ ವಿಶೇಷ ಕೊಡುಗೆ ಸಲ್ಲಿಸುತ್ತಿರುವು ದಕ್ಕಾಗಿ ಬಿಷಪ್ರನ್ನು ಅಕಾಡಮಿಯ ವತಿಯಿಂದ ಸಮ್ಮಾನಿಸಲಾಯಿತು. ಅದೇ ರೀತಿ ರೋಯ್ ಕ್ಯಾಸ್ಟಲಿನೊ ರನ್ನು ಬಿಷಪ್ರವರು ಧರ್ಮಪ್ರಾಂತದ ಪರವಾಗಿ ಸಮ್ಮಾನಿಸಿದರು. ಶಾಲೆಗಳಲ್ಲಿ ಕೊಂಕಣಿ ಕಲಿಕೆಗೆ ಸಂಬಂಧಿಸಿ ಅತ್ಯುತ್ತಮ ಕೊಂಕಣಿ ಶಿಕ್ಷಕ ಪ್ರಶಸ್ತಿ ದಿ. ಜೆಸ್ಸಿ ಸಿಕ್ವೇರ ಸ್ಮಾರಕ ಪುರಸ್ಕಾರವನ್ನು ಕಿನ್ನಿಕಂಬಳ ರೋಸ ಮಿಸ್ತಿಕಾ ಶಾಲೆಯ ಶಿಕ್ಷಕ ಲ್ಯಾನ್ಸಿ ಸಿಕ್ವೇರ ಅವರಿಗೆ ನೀಡಲಾಯಿತು. ಅಕಾಡಮಿಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಜಿಸ್ಟ್ರಾರ್ ಡಾ.ಬಿ.ದೇವದಾಸ್ ಪೈ ವಂದಿಸಿದರು. ಧರ್ಮಪ್ರಾಂತದ ಪ್ರಧಾನ ಗುರು ಡೆನಿಸ್ ಮೊರಾಸ್ ಪ್ರಭು, ಸಾರ್ವಜನಿಕ ಸಂಪರ್ಕ ಅಧಿಕಾರಿ ಾ.ವಿಲಿಯಂ ಮಿನೇಜಸ್, ಶಾಸಕ ಜೆ.ಆರ್. ಲೋಬೊ ಉಪಸ್ಥಿತರಿದ್ದರು. ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರ್ವಹಿಸಿದರು.