ಚಾಲಕ ಮೃತ್ಯು, ಸವಾರ ಗಂಭೀರ
ದ್ವಿಚಕ್ರ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿ
ಉಳ್ಳಾಲ, ೆ.25: ರಾ.ಹೆ.66ರ ಕಲ್ಲಾಪು ಅಡಂಕುದ್ರುವಿನಲ್ಲಿ ಶನಿವಾರ ಬೆಳಗ್ಗೆ ನಡೆದ ಬೈಕ್ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಉಳ್ಳಾಲ ಅಕ್ಕರೆಕೆರೆ ಮಸೀದಿ ಬಳಿ ನಿವಾಸಿ ಮೈಯದ್ದಿ ಎಂಬವರ ಪುತ್ರ ಶಂಸುದ್ದೀನ್(23)ಮೃತ ವ್ಯಕ್ತಿ. ಮೃತ ವ್ಯಕ್ತಿಯ ಸಹೋದರ ವಾಸಿಂ ಗಾಯಗೊಂಡ ವ್ಯಕ್ತಿ.
ಮಂಗಳೂರಿನ ಧಕ್ಕೆಯಲ್ಲಿರುವ ತಂದೆಯ ಕ್ಯಾಂಟೀನ್ ತೆರೆದು ವಹಿವಾಟು ಆರಂಭಿಸಲು ಶನಿವಾರ ಬೆಳಗ್ಗಿನ ಜಾವ ಸಹೋದರರು ಚಲಾಯಿಸಿಕೊಂಡು ಹೋದ ದ್ವಿಚಕ್ರ ವಾಹನವು ಅಡಂಕುದ್ರು ಎಂಬಲ್ಲಿ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಹೋದರಿಬ್ಬರು ರಸ್ತೆಯ ಬದಿಗೆ ಎಸೆಯಲ್ಪಟ್ಟಿದ್ದು, ಚಾಲಕ ಶಂಸುದ್ದೀನ್ ಸ್ಥಳದಲ್ಲೇ ಅಸುನೀಗಿದ್ದಾರೆೆ. ಬೆಳಗ್ಗಿನ ಜಾವ ಇದು ಯಾರ ಗಮನಕ್ಕೂ ಬರಲಿಲ್ಲ.ಬೆಳಗ್ಗಿನ ಜಾವ 5ಗಂಟೆ ವೇಳೆ ಅಪಘಾತ ಸಂಭವಿಸಿದ್ದು, 7 ಗಂಟೆ ವೇಳೆ ಅಪಘಾತ ಪ್ರಕರಣ ದಾರಿ ಹೋಕರ ಗಮನಕ್ಕೆ ಬಂದಿದ್ದು ಕೂಡಲೇ ಸಹಾಯಕ್ಕೆ ಧಾವಿಸಿದ ಸಾರ್ವಜನಿಕರು ತೀವ್ರ ಗಾಯಗೊಂಡಿದ್ದ ವಾಸಿಂ ಮತ್ತು ಶಂಸುದ್ದೀನ್ ಅವರ ಮೃತದೇಹವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ತಿಳಿದು ಬಂದಿದೆ.
ಗಂಭೀರ ಗಾಯಗೊಂಡ ವಾಸಿಂ ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕಾಗಮಿಸಿದ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.