ಇಂದು ಅಗಲಿದ ಸಮಸ್ತ ನೇತಾರರ ಅನುಸ್ಮರಣೆ
ಮಂಗಳೂರು, ಮಾ.4: ಅಡ್ಯಾರು ಕಣ್ಣೂರು ಟಿಟಿಎಸ್ಎಸ್ ವತಿಯಿಂದ ಮಾ. 5ರಂದು 4:30ಕ್ಕೆ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮವು ಬಿಜೆಎಂ ಮಸೀದಿ ವಠಾರದಲ್ಲಿ ನಡೆಯಲಿದೆ. ಅರ್ಷದೀಸ್ ಕೇಂದ್ರ ಸಮಿತಿಯ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ಶರೀಫ್ ಅರ್ಷದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅಸ್ಸೈಯದ್ ಸಿರಾಜುದ್ದೀನ್ ತಂಙಳ್ ದುಆಗೈಯುವರು.ಸಮಸ್ತ ಉಪಾಧ್ಯಕ್ಷ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್ ಉದ್ಘಾಟನೆ ನೆರವೇರಿಸುವರು. ಶೈಖುನಾ ಯು.ಎಂ. ಅಬ್ದುರ್ರಹ್ಮಾನ್ ಮುಸ್ಲಿಯಾರ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಮಗ್ರಿಬ್ ನಮಾಝ್ ಬಳಿಕ ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಸ್ವಲಾತ್ ವಾರ್ಷಿಕ ನಡೆಯಲಿದೆ.
Next Story