ಮಂಗಳೂರು, ಮಾ.8: ದ.ಕ. ಜಿಲ್ಲಾ ಆಟೊ ರಿಕ್ಷಾ ಚಾಲಕರ ಹೋರಾಟ ಸಮಿತಿಯ ವತಿಯಿಂದ ಸೆಂಟ್ರಲ್ ರೈಲ್ವೆ ಸ್ಟೇಶನ್ ಪ್ರಮುಖ ರಸ್ತೆ ಹಾಗೂ ಅದರ ಹತ್ತಿರದ ರೈಲ್ವೆ ಕ್ವಾಟ್ರಸ್ನಿಂದ ಜಿ.ಪಂ., ಮಿನಿ ವಿಧಾನ ಸೌದ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಬುಧವಾರ ಆಟೋ ಚಾಲಕರು ರಸ್ತೆಯಲ್ಲಿ ಆಟೊಗಳನ್ನು ನಿಲ್ಲಿಸಿ ಧರಣಿ ನಡೆಸಿದರು.