ಚುನಾವಣೆ ಫಲಿತಾಂಶ : ಮೂಡುಬಿದಿರೆ ಬಿಜೆಪಿಯಿಂದ ವಿಜಯೋತ್ಸವ
ಮೂಡುಬಿದಿರೆ,ಮಾ.11 : ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿರುವುದರಿಂದ ಮೂಡುಬಿದಿರೆ ಬಿಜೆಪಿ ಕಾರ್ಯಕರ್ತರು ಶನಿವಾರ ಮೂಡುಬಿದಿರೆ ಬಸ್ಸು ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ, ಈ ಚುನಾವಣೆಯ ಫಲಿತಾಂಶವು ಜನತೆ ಮೋದಿ ನೇತೃತ್ವದ ಸರಕಾರದ ಪರ ಇದ್ದಾರೆಂಬುದನ್ನು ಸಾಬೀತು ಪಡಿಸುತ್ತದೆ. ಮುಂದೆಯೂ ಈ ಗೆಲುವು ಮುಂದುವರಿಯಲಿದೆ. ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಇದೇ ರೀತಿಯ ಫಲಿತಾಂಶದ ನಿರೀಕ್ಷೆಯಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರವನ್ನು ಈ ಬಾರಿ ಬಿಜೆಪಿ ತನ್ನದಾಗಿಸಿಕೊಳ್ಳುತ್ತದೆ. ಅದಕ್ಕಾಗಿ ನಾವು ಇಂದಿನಿಂದಲೇ ಶ್ರಮಿಸಲಿದ್ದೇವೆಎಂದರು. ಬಿಜೆಪಿ ನಾಯಕರಾದ ಈಶ್ವರ ಕಟೀಲ್, ಜಗದೀಶ ಅಧಿಕಾರಿ, ಸುಖೇಶ್ ಶೆಟ್ಟಿ, ಸುದರ್ಶನ ಎಂ., ಜೋಯ್ಲಸ್ ಡಿಸೋಜಾ, ಕೃಷ್ಣರಾಜ ಹೆಗ್ಡೆ, ಲಕ್ಷ್ಮಣ ಪೂಜಾರಿ, ಶಾಂತಿ ಪ್ರಸಾದ್ ಹೆಗ್ಡೆ, ಗೋಪಾಲ್ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
Next Story