ಲ್ಯಾಪ್ಟ್ಯಾಪ್ ಕಳವು: ದೂರು
ಮಂಗಳೂರು, ಮಾ. 12: ವ್ಯಕ್ತಿಯೊಬ್ಬರ ಬ್ಯಾಗ್ನಲ್ಲಿದ್ದ ಲ್ಯಾಪ್ಟ್ಯಾಪ್ವೊಂದು ಕಳವಾಗಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೂಳೂರಿನ ನಿವಾಸಿ ಜೀವನ್ರಾಜ್ ಎಂಬವರು ಲ್ಯಾಪ್ಟ್ಯಾಪ್ ಕಳೆದುಕೊಂಡವರು.
ಎಂಟಿಯು ಇಂಡಿಯಾ ಪ್ರೈ.ಲಿ. ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಕೆಲಸದ ನಿಮಿತ್ತ ಕೇರಳ ರಾಜ್ಯದ ಎರ್ನಾಕುಲಂಗೆ ತೆರಳಿದ್ದ ಸಂದರ್ಭ ಕಂಪೆನಿಯವರು ಕೊಟ್ಟಿದ್ದ ಲ್ಯಾಪ್ಟ್ಯಾಪ್ನ್ನು ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಎರ್ನಾಕುಲಂನಿಂದ ಮಾ.10ರಂದು ರಾತ್ರಿ ಬಸ್ಸಿನಲ್ಲಿ ಮಂಗಳೂರಿಗೆ ಹೊರಟಿದ್ದರೆನ್ನಲಾಗಿದೆ. ಮಾ.11ರಂದು ಬೆಳಗ್ಗೆ 6:15ಕ್ಕೆ ನಗರದ ಲಾಲ್ಬಾಗ್ಗೆ ತಲುಪಿ ಅಲ್ಲಿಂದ ಟ್ಯಾಕ್ಸಿ ಮೂಲಕ ಕೂಳೂರಿನ ತನ್ನ ಮನೆಗೆ ವಾಪಾಸಾಗಿದ್ದರು ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಬ್ಯಾಗ್ನ್ನು ಪರಿಶೀಲಿಸಿದಾಗ ಲ್ಯಾಪ್ಟ್ಯಾಪ್ ಕಾಣೆಯಾಗಿರುವುದು ಕಂಡುಬಂದಿದೆ. ಲ್ಯಾಪ್ಟಾಪನ್ನು ಯಾರೋ ಕಳವು ಮಾಡಿರುವುದಾಗಿ ಜೀವನ್ರಾಜ್ ಕಾವೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.