ಅಂಗಾಂಗ ದಾನಿಯ ಕುಟುಂಬಕ್ಕೆ ನೆರವು
ಮೂಡುಬಿದಿರೆ,ಮಾ.14: ಇತ್ತೀಚೆಗೆ ಮೃತಪಟ್ಟ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆಯ ನಿವಾಸಿ, ಅಂಗಾಂಗ ದಾನಿ ಸತೀಶ್ ಆಚಾರ್ಯ ಅವರ ಹೆತ್ತವರಾದ ರಾಘವ ಆಚಾರ್ಯ-ಸುಲೋಚನಾ ದಂಪತಿಗೆ ಅಚ್ಚರಕಟ್ಟೆಯ ವಿವಿಧ ಸಂಘಸಂಸ್ಥೆಗಳು ಕೊಡಮಾಡಿದ ರೂ.25 ಸಾವಿರ ಸಹಾಯಧನವನ್ನು ರವಿವಾರ ವಿತರಿಸಿದರು.
ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಚ್ಚರಕಟ್ಟೆಯ ಅಧ್ಯಕ್ಷ ಹಾಗೂ ಪಂಚಾಯತ್ ಸದಸ್ಯ ದಯಾನಂದ ಪೈ ಅವರು ಮೃತನ ಮನೆಗೆ ತೆರಳಿ ಸಹಾಯಧನ ಹಸ್ತಾಂತರಿಸಿದರು.
ಅಚ್ಚರಕಟ್ಟೆಯ ಜ್ಞಾನೋದಯ ಯುವಕ ಸಂಘದ ಅಧ್ಯಕ್ಷ, ಪಂಚಾಯತ್ ಸದಸ್ಯ ಅಭಿನಂದನ್ ಬಲ್ಲಾಳ್, ಉದ್ಯಮಿ ಸೂರಜ್ ಜೈನ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬೇಂಗುರಿ ಬಾಲಕೃಷ್ಣ ಶೆಟ್ಟಿ, ಸಂಚಾಲಕ ಕುಂಟಾಜೆ ದಯಾನಂದ ಭಟ್, ಪ್ರಧಾನ ಕಾರ್ಯದರ್ಶಿ ಉದಯ ಪೂಜಾರಿ, ಪದಾಧಿಕಾರಿಗಳಾದ ಕಿಶೋರ್, ನಾಗೇಶ್ ದೇವಾಡಿಗ, ರಾಜೇಶ್ ಶೆಟ್ಟಿ, ರಿತೇಶ್ ಶೆಟ್ಟಿ ಉಪಸ್ಥಿತರಿದ್ದರು.
ದಾನಿಗಳ ವಿವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಚ್ಚರಕಟ್ಟೆ (ರೂ.10 ಸಾವಿರ), ಜ್ಞಾನೋದಯ ಯುವಕ ಸಂಘ (ರೂ.5 ಸಾವಿರ),ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಅಚ್ಚರಕಟ್ಟ (ರೂ.5 ಸಾವಿರ), ಸ್ಥಳೀಯರು (ರೂ. 5 ಸಾವಿರ).