ನೀರನ್ನು ಮಿತವಾಗಿ ಬಳಸಲು ಸಲಹೆ
ಪಡುಬಿದ್ರಿ,ಮಾ.22: ನಿರನ್ನು ಮಿತವಾಗಿ ಬಳಸಿಕೊಂಡು ನೀರನ್ನು ಉಳಿಸಿ. ಯಾರು ಭೂಮಿತಾಯಿಯನ್ನು ಉಳಿಸುವ ಪ್ರಯತ್ನ ಮಾಡುತ್ತಾರೋ ಆವಾಗ ಈ ಭೂಮಿಯಲ್ಲಿ ಪ್ರತಿಯಂದು ಜೀವರಾಶಿಗೂ ಸುಖ ಶಾಂತಿ ನೆಮ್ಮದಿಯಿಂದ ಬಾಳಲು ಸಾಧ್ಯ ಎಂದು ಪಡುಬಿದ್ರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಕುಮಾರ್ ವೈ ಹೇಳಿದರು.
ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಪಡುಬಿದ್ರಿ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಶ್ವ ಜಲ ದಿನಾಚರಣೆಯ ಅಂಗವಾಗಿ ಜನಜಾಗೃತಿ ಸ್ಟಿಕ್ಕರ್ ಬಿಡುಗಡೆ ಮಾಡಿ ಮಾತನಾಡಿದರು.
ರೋಟರಿ ಅದ್ಯಕ್ಷ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕರುಣಾಕರ್ ನಾಯಕ್, ರೋಟರಿ 3181ನ ಸಹಾಯಕ ಗವರ್ನರ್ ಜಿನ್ರಾಜ್ ಸಾಲ್ಯಾನ್, ಪಡುಬಿದ್ರಿ ಸಿ.ಎ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್ ಕುಮಾರ್, ಪಂಚಾಯತ್ ಪಿಡಿಒ ಪಂಚಾಕ್ಷರಿ ಹಿರೇಮಠ್, ರೋಟರಿಯ ನಿಕಟಪೂರ್ವ ಅಧ್ಯಕ್ಷ ಹೇಮಚಂದ್ರ, ಪೂರ್ವಾಧ್ಯಕ್ಷ ರಾಮಕೃಷ್ಣ ಆಚಾರ್ಯ, ನಿಯೋಜಿತ ಅಧ್ಯಕ್ಷ ರಮೀರ್ ಹುಸೇನ್, ವೆಂಕಟೇಶ್ ಎಂ.ಟಿ, ಅಬ್ದುಲ್ ಖಾದರ್, ಸುಧಾಕರ ಕೆ. ಉಪಸ್ಥಿತರಿದ್ದರು.