ದುಷ್ಕರ್ಮಿಗಳಿಂದ ದಿನಸಿ ಅಂಗಡಿಗೆ ಬೆಂಕಿ
ಕಾಸರಗೋಡು, ಮಾ.23: ದಿನಸಿ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಶುಕ್ರವಾರ ಮುಂಜಾನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.
ಮೊಗ್ರಾಲ್ ಕಡವತ್ ನ ಎಂ. ಸತೀಶ್ ಎಂಬವರ ಅಂಗಡಿಗೆ ಬೆಂಕಿ ಹಚ್ಚಲಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಮೇಲಂತಸ್ತಿನ ಕೊಠಡಿಯಲ್ಲಿ ಮಲಗಿದ್ದವರು ಹೊಗೆ ಬರುತ್ತಿರುವುದನ್ನು ಕಂಡು ಗಮನಿಸಿದಾಗ ಬೆಂಕಿ ಹರಡಿರುವುದು ಗಮನಕ್ಕೆ ಬಂದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.
ಈ ಕೃತ್ಯವನ್ನು ಖಂಡಿಸಿ ವರ್ತಕರು ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಅಂಗಡಿ ಮುಚ್ಚಿ ಹರತಾಳ ನಡೆಸಿದರು.
Next Story