ತಣ್ಣಿರುಬಾವಿ ಬೀಚ್: ನೀರುಪಾಲಾದ ಯುವಕ
ಸಾಂದರ್ಭಿಕ ಚಿತ್ರ
ಮಂಗಳೂರು, ಮಾ. 28: ತಣ್ಣೀರು ಬಾವಿಗೆ ಬೀಚ್ಗೆ ಬಂದಿದ್ದ ಆರು ಮಂದಿಗಳ ಪೈಕಿ ಓರ್ವ ನೀರು ಪಾಲಾಗಿರುವ ಘಟನೆ ಇಂದು ಸಂಜೆ ನಡೆದಿದೆ.
ನೀರುಪಾಲಾಗಿರುವ ವ್ಯಕ್ತಿಯನ್ನು ವಿದ್ಯಾರ್ಥಿಯನ್ನು ಕಾವೂರು ಬೊಂದೇಲ್ ಮಸೀದಿ ಬಳಿಯ ನಿವಾಸಿ ಅಬೂಬಕರ್ ಎಂಬವರ ಪುತ್ರಸಫ್ವಾನ್ (19) ಎಂದು ಗುರುತಿಸಲಾಗಿದೆ.
ಸಫ್ವಾನ್ ವೃತ್ತಿಯಲ್ಲಿ ಇಂಟೀರಿಯಲ್ ಡೆಕೋರೇಟರ್ ಆಗಿದ್ದ ಎಂದು ಹೇಳಲಾಗಿದೆ.ಇಂದು ಸಂಜೆ ಸುಮಾರು 5 ಗಂಟೆಗೆ ಸಫ್ವಾನ್ ಮತ್ತು ಕುಟುಂಬ ಹಾಗೂ ಆತನ ಇಬ್ಬರು ಸ್ನೇಹಿತರು ಪಣಂಬೂರು ತಣ್ಣೀರುಬಾವಿ ಬೀಚ್ಗೆ ಬಂದಿದ್ದರು.
ಸಂಜೆ ಸುಮಾರು 6:30ರ ಹೊತ್ತಿಗೆ ಎಲ್ಲರೂ ಬೀಚ್ನಿಂದ ಬೀಚ್ನಿಂದ ಹಿಂದಿರುಗುತ್ತಿದ್ದರು. ಈ ಪೈಕಿ ಸಫ್ವಾನ್ ಮತ್ತು ಆತನ ಸ್ನೇಹಿತ ಹಫೀಝ್ ಎಂಬವರು ಮತ್ತೆ ಬೀಚ್ಗೆ ತೆರಳಿ ಇಬ್ಬರು ಸ್ನಾನ ಮಾಡಲೆಂದು ನೀರಿಗೆ ಧುಮುಕಿದ್ದರು. ಈ ಪೈಕಿ ಸಫ್ವಾನ್ ನೀರಿನಿಂದ ಮೇಲೆ ಬಾರದೆ ನೀರು ಪಾಲಾಗಿದ್ದಾನೆ. ಹಫೀಝ್ ರಕ್ಷಿಸಲ್ಪಟ್ಟಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಬಗ್ಗೆ ಪಣಂಬೂರು ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.