ಬಾವಿಗೆ ಬಿದ್ದು ಬಾಲಕ ಮೃತ್ಯು
ಕಾರ್ಕಳ, ಮಾ.30: ಶಾಲೆ ಬಿಟ್ಟು ಮನೆಗೆ ಬಂದ ಬಾಲಕನೊಬ್ಬ ಆಟವಾಡಲು ಮನೆಯ ಬಳಿ ಇದ್ದ ಗದ್ದೆಗೆ ತೆರಳಿದ್ದಾಗ, ಗದ್ದೆ ಬದಿಯಲ್ಲಿದ್ದ ಆವರಣ ಇಲ್ಲದ ಬಾವಿಗೆ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಈದು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಶೇಖರ ಶೆಟ್ಟಿ ಎಂಬವರ ಪುತ್ರ ಸಂಕೇತ್ (10) ಎದು ಗುರುತಿಸಲಾಗಿದೆ. ಘಟನೆ ಮಾ.28ರ ಸಂಜೆ 5:30ರ ಸುಮಾರಿಗೆ ನಡೆದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story