ಎ19: ಅಮರಾವತಿ ಮಂದಿರ ಉದ್ಘಾಟನೆ
ಮೂಡುಬಿದಿರೆ, ಎ.18: ಇಲ್ಲಿನ ಸಮಾಜ ಮಂದಿರದ ಆವರಣದಲ್ಲಿರುವ ಸ್ವರ್ಣ ಮಂದಿರದ ಮೇಲ್ಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 800 ಆಸನ ವ್ಯವಸ್ಥೆಯ ನೂತನ ಸಭಾಂಗಣ ಅಮರಾವತಿ ಮಂದಿರದ ಉದ್ಘಾಟನೆಯನ್ನು ಎ.19ರ ಸಂಜೆ 5ಕ್ಕೆ ಶಾಸಕ ಕೆ.ಅಭಯಚಂದ್ರ ಜೈನ್ ನೆರವೇರಿಸಲಿದ್ದಾರೆ.
ಸಮಾಜ ಮಂದಿರ ಸಭಾದ ನಿಕಟಪೂರ್ವ ಅಧ್ಯಕ್ಷ ಡಾ.ಎಲ್.ಸಿ.ಸೋನ್ಸ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಮಾಜ ಮಂದಿರ ಸಭಾದ ಕಾರ್ಯದರ್ಶಿ ಎಚ್. ಉದಯ ಶಂಕರ ಪ್ರಭು ತಿಳಿಸಿದ್ದಾರೆ
Next Story