‘ಮಿಸ್ ಸೂಪರ್ ಟ್ಯಾಲೆಂಟ್’ ಸ್ಪರ್ಧೆಗೆ ನಿಮಿಕಾ
ಮಂಗಳೂರು, ಎ.20: ದಕ್ಷಿಣ ಕೊರಿಯದ ಸಿಯೋಲ್ನಲ್ಲಿ ಎ.23ರಂದು ನಡೆಯಲಿರುವ ‘ಮಿಸ್ ಸೂಪರ್ ಟ್ಯಾಲೆಂಟ್ ಆಫ್ ದಿ ವರ್ಲ್ಡ್ 2017’ ಸ್ಪರ್ಧೆಯಲ್ಲಿ ನಗರದ ಕುಡುಪು ನಿವಾಸಿ ನಿಮಿಕಾ ರತ್ನಾಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈಕೆ ಇಂಟೀರಿಯರ್ ಡಿಸೈನರ್ ರತ್ನಾಕರ್ ಎನ್.ಬಿ. ಮತ್ತು ಹೇಮಲತಾ ರತ್ನಾಕರ್ ದಂಪತಿಯ ಪುತ್ರಿ.
ಇಂದು ಜಾಗೃತಿ ಆಂದೋಲನ ಉಡುಪಿ, ಎ.20: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ಶಿಶು ಅಭಿವೃದ್ಧಿ ಯೋಜನೆ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪುರಸಭೆ ಕಾಪು ಇವರ ಸಂಯುಕ್ತ ಆಶ್ರಯದಲ್ಲಿ ‘ಬಾಲ್ಯ ವಿವಾಹ ನಿಷೇಧ ಕಾಯ್ದೆ -2006, ಮಕ್ಕಳ ಹಕ್ಕುಗಳು ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ’ ಜಾಗೃತಿ ಆಂದೋಲನ ಕಾರ್ಯಕ್ರಮ ಎ.21ರಂದು ಬೆಳಗ್ಗೆ 10 ಗಂಟೆಗೆ ಕಾಪು ಬಿಲ್ಲವರ ಸಹಾಯಕ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕಾಪು ಶಾಸಕ ವಿನಯಕುಮಾರ್ ಸೊರಕೆ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕಾಪು ಪುರಸಭೆ ಅಧ್ಯಕ್ಷೆ ಸೌಮ್ಯ ವಹಿಸುವರು. ಬೆಳಗ್ಗೆ 9ಕ್ಕೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಕಾಪು ಬಿಲ್ಲವ ಸಹಾಯಕ ಸಂಘದ ಸಭಾಂಗಣದವರೆಗೆ ಜಾಥಾ ನಡೆಯಲಿದ್ದು, ಜಾಥಾವನ್ನು ಜಿಪಂ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.