ಉಳ್ಳಾಲದಲ್ಲಿ ಬೃಹತ್ ರಕ್ತದಾನ ಶಿಬಿರ
ಉಳ್ಳಾಲ, ಎ.24: ಎಸ್.ಡಿ.ಪಿ.ಐ. ಉಳ್ಳಾಲ ವಲಯ ಹಾಗೂ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಕಂಕನಾಡಿಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಭಾಗಿತ್ವದಲ್ಲಿ ರವಿವಾರ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಿತು.
ಶಿಬಿರದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್ ವಹಿಸಿದ್ದರು.
ಇರ್ಷಾದ್ ಸಖಾಫಿ ದುಆದ ಮೂಲಕ ಶಿಬಿರಕ್ಕ್ಕೆ ಚಾಲನೆ ನೀಡಿದರು.
ಎಸ್.ಡಿ.ಪಿ.ಐ. ಉಳ್ಳಾಲ ಪುರಸಭೆ ಸಮಿತಿಯ ಅಧ್ಯಕ್ಷ ಅಬ್ದುಲ್ ರವೂಫ್ ಸ್ವಯಂ ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಎ.ಆರ್.ಅಬ್ಬಾಸ್, ಅಬ್ಧುಲ್ ರವೂಫ್, ಅಹ್ಮದ್ ನಝೀರ್, ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ಇದರ ಸ್ಥಾಪಕ ನಿಸಾರ್ ದಮ್ಮಾಮ್ ಉಳ್ಳಾಲ ಹಾಗೂ ಎಡ್ಮಿನ್ಗಳಾದ ಯಾಕೂಬ್ ಫೈರೋಝ್, ಮುಸ್ತಫಾ ಅಡ್ಡೂರು ದೆಮ್ಮಲೆ, ಮೆಹತಾಬ್ ಎಂ.ಕೆ., ಇರ್ಝಾನ್ ಅಡ್ಡೂರು, ನಿಝಾಮ್ ಅಡ್ಡೂರು, ನಿಝಾಂ ಉಳ್ಳಾಲ, ಫಯಾಝ್ ಉಳ್ಳಾಲ, ಅಲ್ಮಾಝ್ ಉಳ್ಳಾಲ, ಸಾದಿಕ್ ಪಾವೂರು ಮೊದಲಾದವರು ಉಪಸ್ಥಿತರಿದ್ದರು.
Next Story