ಸುರಗಿರಿ: ಆಲಯ ಪರಿಗ್ರಹ, ಬ್ರಹ್ಮಕಲಶ ಮೂಹೂರ್ತ
ಮುಲ್ಕಿ, ಎ.24: ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 1ರಂದು ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಆಲಯ ಪರಿಗ್ರಹ, ಬ್ರಹ್ಮಕಲಶ ಮೂಹೂರ್ತ ರವಿವಾರ ಬೆಳಗ್ಗೆ ನಡೆಯಿತು.
ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ ಶರಣ ಮತ್ತು ದೇವಳದ ಪ್ರಧಾನ ಅರ್ಚಕ ಅಂಗಡಿಮಾರ್ ವಿಶ್ವೇಶ್ವರ ಭಟ್ ಉಪಸ್ಥಿತಿಯಲ್ಲಿ ಈ ವಿಧಿವಿಧಾನ ನೆರವೇರಿತು.
ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅತ್ತೂರು ಹೊಸಲೊಟ್ಟು ಬಾಬು ಶೆಟ್ಟಿ, ಜಿರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ ಸೀತಾರಾಮ ಶೆಟ್ಟಿ ದುರ್ಗಾದಯ, ಕಾರ್ಯಾಧ್ಯಕ್ಷ ಅತ್ತೂರು ಬೈಲು ವೆಂಕಟರಾಜ ಉಡುಪ, ದೇವಳದ ಮೊಕ್ತೇಸರರಾದ ಕೊಡುಮನೆ ವೈ ಬಾಲಚಂದ್ರ ಭಟ್, ಪ್ರಕಾಶ್ ಜೆ. ಶೆಟ್ಟಿ ಮೈತ್ರಿ ಪಾರ್ಕ್ ಮುಂಬೈ, ಕೆ ಅನಂತರಾಮ ಭಟ್ ಅಂಗಡಿಮಾರ್, ಧನಂಜಯ ಪಿ. ಶೆಟ್ಟಿಗಾರ್ ಸಾಗರಿಕಾ, ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಲವ ಶೆಟ್ಟಿ ಕೆಮ್ರಾಲ್, ಪ್ರಧಾನ ಕೋಶಾಧಿಕಾರಿ ರಮಾನಾಥ ಎನ್. ಶೆಟ್ಟಿ ಅಮಿತಾ ನಿವಾಸ ಕೆಮ್ರಾಲ್, ಸಮಿತಿಯ ಗೌರಾವಾಧ್ಯಕ್ಷ ಅತ್ತೂರು ಭಂಡಾರ ಮನೆ ಶಂಭು ಮುಕಾಲ್ದಿ, ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಜೆ. ಶೆಟ್ಟಿ, ಮಾಗಣೆಯ ಗುತ್ತು, ಬರ್ಕೆ, ಅತ್ತೂರು ಕೆಮ್ರಾಲ್ ಕಿಲೆಂಜೂರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.