ಉಳ್ಳಾಲ: ಬಸ್ ಗೆ ಬೈಕ್ ಢಿಕ್ಕಿ; ಸವಾರ ಮೃತ್ಯು
ಉಳ್ಳಾಲ, ಎ.24: ಉಳ್ಳಾಲದ ಮಾಸ್ತಿಕಟ್ಟೆಯ ಬಳಿ ಬಸ್ಸೊಂದಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.
ತೊಕ್ಕೊಟ್ಟು ನಿವಾಸಿ ಸುನೀಲ್ (24) ಮೃತಪಟ್ಟ ಬೈಕ್ ಸವಾರ. ಮಂಗಳೂರು ಕಡೆಯಿಂದ ಉಳ್ಳಾಲಕ್ಕೆ ಸಂಚರಿಸುತ್ತಿದ್ದ ಬಸ್ಸೊಂದಕ್ಕೆ ಮಾಸ್ತಿಕಟ್ಟೆ ಬಳಿ ಬೈಕ್ ಅಡ್ಡ ಬಂದಿತ್ತು. ಬಸ್ ಚಾಲಕ ಅಪಘಾತವನ್ನು ತಪ್ಪಿಸುವ ಪ್ರಯತ್ನ ಮಾಡಿದರೂ ಬೈಕ್ಗೆ ಢಿಕ್ಕಿ ಹೊಡೆದು ಬಸ್ ಡಿವೈಡರ್ ಮೇಲೆ ಹತ್ತಿ ನಿಂತಿತ್ತು. ಘಟನೆಯಿಂದ ಗಾಯಗೊಂಡಿದ್ದ ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
Next Story