ಕೆಎಸ್ಸಿಎ ಕ್ರಿಕೆಟ್ಗೆ ಉಡುಪಿ ಜಿಲ್ಲಾ ತಂಡ
ಉಡುಪಿ, ಎ.24: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ನಡೆಯಲಿರುವ ಅಂತರ್ಜಿಲ್ಲಾ ಕ್ರಿಕೆಟ್ ಕೂಟದಲ್ಲಿ ಭಾಗವಹಿಸುವ ಉಡುಪಿ ಜಿಲ್ಲಾ 14 ವರ್ಷದೊಳಗಿನವರ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ.
ತಂಡ: ಆಶೀಷ್ (ನಾಯಕ), ಮಯೂರ್, ಮನ್ವಿತ್, ನಿಖಿಲ್, ಧೀರಜ್, ಶ್ರೇಯಸ್,ಗಗನ್, ಸನ್ಮತಿ, ಧ್ಯಾನೇಶ್, ಹಾಲಪ್ಪ, ಮುಕ್ಕಣ್ಣ, ತಬೀಶ್, ಆರ್ಯನ್, ಶರಣ್ ಮತ್ತು ಸಂಪತ್ ಭಟ್. ತರಬೇತುದಾರ: ಟ್ರೆವೆರ್ ಡಯಾಸ್, ಸಂಯೋಜಕ ಬಾಲಕೃಷ್ಣ ಪರ್ಕಳ.
ಮಂಗಳೂರಿನ ಎನ್ಎಂಪಿಟಿ ಮೈದಾನದಲ್ಲಿ ಎ.27ರಂದು ನಡೆಯುವ ಮೊದಲ ಪಂದ್ಯದಲ್ಲಿ ದಕ್ಷಿಣಕನ್ನಡ ಹಾಗೂ 29ರಂದು ಕೊಡಗು ಜಿಲ್ಲಾ ತಂಡ ಗಳನ್ನು ಉಡುಪಿ ಜಿಲ್ಲಾ ತಂಡ ಎದುರಿಸಲಿದೆ.
Next Story