ಮೇ 1: ಅಲಂಕಾರ್ನಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ನ 102ನೆ ಶಾಖೆ ಉದ್ಘಾಟನೆ
ಮಂಗಳೂರು, ಎ.26: ಗ್ರಾಮೀಣ ಪ್ರದೇಶಗಳಲ್ಲಿ ಉತ್ಕೃಷ್ಟ ಬ್ಯಾಂಕಿಂಗ್ ಸೇವೆಯನ್ನು ನೀಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ 102ನೆ ನೂತನ ಶಾಖೆಯು ಪುತ್ತೂರು ತಾಲೂಕಿನ ಅಲಂಕಾರ್ನಲ್ಲಿ ಮೇ 1ರಂದು ಪೂರ್ವಾಹ್ನ 10:30 ಕ್ಕೆ ಉದ್ಘಾಟನೆಗೊಳ್ಳಲಿದೆ. ಅಲಂಕಾರ್ನಲ್ಲಿರುವ ಶ್ರೀಲಕ್ಷಿ್ಮ ೀ ಟವರ್ಸ್ನಲ್ಲಿ ಕಾರ್ಯಾರಂ ಭಗೊಳ್ಳುವ ಈ ಶಾಖೆಯನ್ನು ಶಾಸಕ ಅಂಗಾರ ಎಸ್. ಉದ್ಘಾ ಟಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ವಹಿಸಲಿರುವರು. ಗಣಕೀಕರಣದ ಉದ್ಘಾಟನೆಯನ್ನು ಶಾಸಕಿ ಶಕುಂತಳಾ ಶೆಟ್ಟಿ, ಭದ್ರತಾ ಕೋಶದ ಉದ್ಘಾಟನೆಯನ್ನು ಅಲಂಕಾರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ನೆರವೇರಿಸಲಿರುವರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ, ಅಲಂಕಾರು ಗ್ರಾಪಂ ಅಧ್ಯಕ್ಷೆ ಸುನಂದಾ ಬಾರ್ಕುಳ, ದ.ಕ. ಜಿಪಂ ಸದಸ್ಯೆ ಪ್ರಮೀಳಾ ಜನಾದರ್ನ್, ತಾಪಂ ಸದಸ್ಯೆ ತಾರಾ ತಿಮ್ಮಪ್ಪ ಹಾಗೂ ಲಕ್ಷಿ್ಮ ೀ ಟವರ್ಸ್ನ ಮಾಲಕ ಹೇಮಂತ್ ರೈ ಮನವಳಿಕೆ ಗುತ್ತು ಭಾಗವಹಿಸಲಿರುವರು.
ಈ ಶಾಖೆಯು ಸಂಪೂರ್ಣ ಗಣಕೀಕೃತಗೊಂಡು, ಕೋರ್ ಬ್ಯಾಂಕಿಂಗ್ ಹಾಗೂ ಏಕಗವಾಕ್ಷಿ ಸೌಲಭ್ಯದ ಜೊತೆಗೆ ಆರ್ಟಿಜಿಎಸ್/ನೆಫ್ಟ್ ಸೌಲಭ್ಯವು ಈ ಶಾಖೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂದು ಬ್ಯಾಂಕ್ನ ಪ್ರಕಟನೆ ತಿಳಿಸಿದೆ.