ಸಾಮೂಹಿಕ ಉಚಿತ ಸುನ್ನತ್ ಕಾರ್ಯಕ್ರಮ
ಬಂಟ್ವಾಳ, ಮೇ 9: ನುಸುರತುಲ್ ಮೀಲಾದುನ್ನಬಿ ಸಂಘ ಶಾಂತಿ ಅಂಗಡಿ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ 14ನೆ ವರ್ಷದ ಬಡ ಮಕ್ಕಳಿಗೆ ಸಾಮೂಹಿಕ ಉಚಿತ ಸುನ್ನತ್ ಕಾರ್ಯಕ್ರಮ ಮಿತ್ತಬೈಲ್ ಜುಮಾ ಮಸೀದಿಯ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ನೆರವೇರಿಸಿ ದುಅ ಮಾಡಿದರು. ಸಂಘದ ಅಧ್ಯಕ್ಷ ಅಬೂಬಕ್ಕರ್ ಕರಾವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಿತ್ತಬೈಲ್ ಜುಮಾ ಮಸೀದಿ ಖತೀಬ್ ಎಂ.ವೈ.ಅಶ್ರಫ್ ಫೈಝಿ, ಸಹ ಮುದರ್ರಿಸ್ ಅಬ್ದುಲ್ ಹಮೀದ್ ದಾರಿಮಿ, ಪರ್ಲ್ಯ ಜುಮಾ ಮಸೀದಿ ಖತೀಬ್ ಮುಹ್ಸಿನ್ ಫೈಝೀ, ಸದರ್ ಅಧ್ಯಾಪಕ ಎ.ಎಚ್.ಅಬ್ದುಲ್ ಹಮೀದ್ ದಾರಿಮಿ, ಮಿತ್ತಬೈಲ್ ಜುಮಾ ಮಸೀದಿ ಅಧ್ಯಕ್ಷ ಎಸ್.ಹಬೀಬುಲ್ಲಾ, ಕಾರ್ಯದರ್ಶಿ ಮುಹಮ್ಮದ್ ಅದ್ದೇಡಿ, ಸಂಘದ ಕಾರ್ಯದರ್ಶಿ ಆದಂ ಪಲ್ಲ ಸಹಿತ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 57 ಮಕ್ಕಳಿಗೆ ಮುಂಜಿ ನಡೆಸಲಾಯಿತು. ಸಂಘದ ಸರ್ವ ಸದಸ್ಯರ ಕಾರ್ಯಕ್ರಮದಲ್ಲಿ ಸಹಕರಿಸಿದರು.
Next Story