ಶೈಖುನಾ ಕೆ.ಎಂ. ಉಸ್ತಾದರಿಗೆ ಗೌರವಾರ್ಪಣೆ
ಮಂಗಳೂರು, ಮೇ 16: ದರ್ಸ್ ಸೇವಾ ರಂಗದಲ್ಲಿ 40 ವರ್ಷ ಪೂರೈಸಿದ ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾದ ಮುಶಾವರ ಸದಸ್ಯ, ದ.ಕ. ಜಿಲ್ಲಾ ಜಂ-ಇಯ್ಯತುಲ್ ಉಲಮಾದ ಉಪಾಧ್ಯಕ್ಷ, ಪ್ರತಿಷ್ಠಿತ ಮಂಗಳೂರಿನ ಅಝ್ಹರಿಯಾದ ಪ್ರಾಂಶುಪಾಲ ಶೈಖುನಾ ಕೆ.ಎಂ.ಹೈದರ್ ಮದನಿ ಕರಾಯ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ಬಂದರ್ನ ಅಝ್ಹರಿಯಾದಲ್ಲಿ ಜರಗಿತು.
ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್, ಸೈಯದ್ ಮುಖ್ತಾರ್ ತಂಙಳ್ ಕುಂಬೋಲ್, ಸದಕತುಲ್ಲಾ ಫೈಝಿ ಮಂಗಳೂರು, ಬಶೀರ್ ಮದನಿ ಅಝ್ಹರಿಯಾ, ಕೇಂದ್ರ ಜುಮಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ, ಮಾಜಿ ಮೇಯರ್ ಅಶ್ರಫ್, ಅಝ್ಹರಿಯಾ ಸಂಸ್ಥೆಯ ಅಧ್ಯಕ್ಷ ವೈ.ಎಂ.ಕೆ. ಕುಂಞಿ ಹಾಜಿ, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಕಾರ್ಪೊರೇಟರ್ ಅಬ್ದುಲ್ ಲತೀಫ್, ಅಬ್ದುಲ್ ರವೂಫ್ ಮತ್ತಿತರರು ಉಪಸ್ಥಿತರಿದ್ದರು.
Next Story