ಪಲ್ಗುಣಿ ನದಿ ಉಳಿವಿಗಾಗಿ ಡಿವೈಎಫ್ಐ ಧರಣಿ
ಮಂಗಳೂರು, ಮೇ 19: ಪಲ್ಗುಣಿ ನದಿ ಉಳಿಸಿ ಅಭಿಯಾನದ ಅಂಗವಾಗಿ ಬೈಕಂಪಾಡಿಯಲ್ಲಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯ ಮುಂದೆ ಡಿವೈಎಫ್ಐ ಶುಕ್ರವಾರ ಧರಣಿ ನಡೆಸಿತು.
ಸಭೆಯನ್ನುದ್ದೇಶಿಸಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, 62ನೆ ತೋಕೂರು ಗ್ರಾಪಂ ಅಧ್ಯಕ್ಷೆ ಪ್ರೆಸಿಲ್ಲಾ ಡಿಸೋಜ, ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿದರು.
ಗ್ರಾಪಂ ಸದಸ್ಯರಾದ ಅಬೂಬಕರ್ ಬಾವಾ, ಕ್ಲೆವಿನ್, ಡಿವೈಎಫ್ಐ ಮುಖಂಡರಾದ ಅಜ್ಮಲ್ ಅಹ್ಮದ್, ಶ್ರೀನಾಥ್ ಕಾಟಿಪಳ್ಳ, ಸಾದಿಕ್ ಕಣ್ಣೂರು ಮತ್ತಿತರರು ಪಾಲ್ಗೊಂಡಿದ್ದರು.
Next Story