"ಮಾನವರು ಸಹೋದರರು ಸೌಹಾರ್ದ ವೇದಿಕೆ" ಅಸ್ತಿತ್ವಕ್ಕೆ
ಮಂಗಳೂರು, ಮೇ 24: ಸೌಹಾರ್ದ ಸಮಾಜಕ್ಕಾಗಿ, ಪ್ರಜಾಪ್ರಭುತ್ವದ ಹಿತವನ್ನ ಕಾಯಲು 'ಮಾನವರು ಸಹೋದರರು ಸೌಹಾರ್ದ ವೇದಿಕೆ' ಎಂಬ ಹೊಸ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಕೆ.ಎ ಅಬ್ದುಲ್ ಅಝೀಝ್ ಪುಣಚ, ಉಪಾಧ್ಯಕ್ಷರುಗಳಾಗಿ ಎಚ್.ಭೀಮರಾವ್ ವಾಷ್ಠರ್ ಸುಳ್ಯ, ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ, ನವೀನ್ ಪಿರೇರಾ ಸುರತ್ಕಲ್, ಹಮೀದ್ ಹಸನ್ ಮಾಡೂರು, ಪ್ರಧಾನ ಕಾರ್ಯದರ್ಶಿಯಾಗಿ ಸಫ್ವಾನ್ ಸವಣೂರು, ಜೊತೆ ಕಾರ್ಯದರ್ಶಿಗಳಾಗಿ ಯಂಶ ಬೇಂಗಿಲ, ಅಲ್ತಾಫ್ ಬಿಳಗುಳ, ಕೋಶಾಧಿಕಾರಿಗಳಾಗಿ ವಿಜಯ್ ದಾಸ್ ನವಲಿ, ಅಶೋಕ್ ಕುಮಾರ್ ಕಾಸರಗೋಡು, ಕಾನೂನು ಸಲಹೆಗಾರರಾಗಿ ಹನೀಫ್ ಸಾಹೇಬ್ ಪಾಜಪಳ್ಳ, ಮಾಧ್ಯಮ ಸಲಹೆಗಾರರಾಗಿ ಪತ್ರಕರ್ತ ಶಂಶೀರ್ ಬುಡೋಳಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ಲತೀಫ್ ಎಸ್ ಬಿ, ನಿಝಾಮುದ್ದೀನ್ ಗೋಳಿಪಡ್ಪು, ಲುಕ್ಮಾನುಲ್ ಹಕೀಂ ಅಡ್ಯಾರ್ , ನಾಸಿರ್ ಸಜಿಪ, ಸಾಬಿತ್ ಕುಂಬ್ರ, ನಿಝಾಂ ಮಂಚಿ, ಅಝೀಝ್ ಮಾಡಾವು, ಇಬ್ರಾಹಿಂ ಖಲೀಲ್ ಪುತ್ತೂರು, ಮುಸ್ತಫಾ ಅಂಜಿಕ್ಕಾರ್ ಹಾಗೂ ಮುತ್ತಲಿಬ್ ನಾರ್ಶ ಆಯ್ಕೆಯಾದರು.