ನುಗ್ಗೆ ಕಾಯಿ ಕೊಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗಲಿ ವಿದ್ಯಾರ್ಥಿ ಮೃತ್ಯು
ಕಾಸರಗೋಡು, ಮೇ 29: ಕಬ್ಬಿಣದ ಸರಳಿನಿಂದ ನುಗ್ಗೆ ಕಾಯಿ ಕೊಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗಲಿ ವಿದ್ಯಾರ್ಥಿ ಮೃತಪಟ್ಟ ಘಟನೆ ಬೇಕಲ ಸಮೀಪದ ಪೆರಿಯಾಟಡ್ಕದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ತಮಿಳುನಾಡು ನಾಗರಕೋವಿಲ್ ನ ಆರ್. ಜಿನಿತ್ ( 17) ಎಂದು ಗುರುತಿಸಲಾಗಿದೆ. ಈತ ನಾಗರಕೋವಿಲ್ ಕಾಲೇಜಿನ 12ನೇ ತರಗತಿ ವಿದ್ಯಾರ್ಥಿಯಾಗಿದ್ದರು.
ರಜೆಯಲ್ಲಿ ಬೇಕಲ ಪೆರಿಯಾಟಡ್ಕದಲ್ಲಿರುವ ಚಿಕ್ಕಮ್ಮನ ಮನೆಗೆ ಬಂದಿದ್ದು, ಮನೆ ಸಮೀಪದ ನುಗ್ಗೆ ಮರದಿಂದ ನುಗ್ಗೆ ಕೊಯ್ಯು ತ್ತಿದ್ದಾಗ ಮೇಲ್ಗಡೆ ಹಾದು ಹೋಗಿದ್ದ ಎಚ್.ಟಿ.ಲೈನ್ ತಂತಿ ತಗಲಿ ಈ ಘಟನೆ ನಡೆದಿದೆ.
ಮೃತದೇಹವನ್ನು ಬೇಕಲ ಠಾಣಾ ಪೊಲೀಸರು ಮಹಜರು ನಡೆಸಿ, ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿ ಊರಿಗೆ ಕೊಂಡೊಯ್ಯಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story