ನೂರ್ ಮುಹಮ್ಮದ್ ನಿಧನಕ್ಕೆ ಸಂತಾಪ
ಮುಲ್ಕಿ, ಮೇ 30: ಮುಲ್ಕಿಯ ಖ್ಯಾತ ಬೊಟ್ಟು ಮನೆತನದ, ಮುಸ್ಲಿಂ ಸಮುದಾಯದ ನೇತಾರ, ಸಮಾಜ ಸೇವಕ, ಕಾಂಗ್ರೆಸ್ನ ರಾಜ್ಯ ಮಟ್ಟದ ನಾಯಕ, ಮುಲ್ಕಿ ಶಾಫಿ ಜಮಾಅತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನೂರ್ ಮುಹಮ್ಮದ್ ಬೊಟ್ಟು ಅವರ ನಿಧನದಿಂದ ಕರ್ನಾಟಕದ ಮುಸ್ಲಿಮ್ ಸಮುದಾಯ ಒಬ್ಬ ಮಹಾನ್ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಕಾರ್ನಾಡ್ ಫೌಂಡೇಶನ್ನ ಸಂಸ್ಥಾಪಕ ಅಧ್ಯಕ್ಷ ಅಶ್ಫಾಕ್ ಎ. ಕಾರ್ನಾಡ್ ತೀವ್ರ ಸಂತಾಪ ಸೂಚಿಸಿದ್ದಾರೆ.
Next Story