ಮಂಗಳೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರ ಬಂಧನ
ಮಂಗಳೂರು, ಮೇ 31: ನಗರದ ಕೊಡಿಯಾಲ್ ಬೈಲ್ ಸಮೀಪದ ವಸತಿ ಸಂಕೀರ್ಣವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪೊಲೀಸ್ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದು, ರಮೇಶ್, ಶ್ರೀನಿವಾಸ್ ಶ್ರೀಯಾರ್ ಹಾಗೂ ಆ್ಯಗ್ನೆಸ್ ಪಿಂಟೊ ಎಂಬವರನ್ನು ಬಂಧಿಸಿದ್ದಾರೆ. ಸ್ಥಳದಲ್ಲಿದ್ದ ಇಬ್ಬರನ್ನು ರಕ್ಷಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್ಸೈ ಹರೀಶ್ ಎಚ್.ವಿ., ಎಎಸ್ಸೈ ಜನಾರ್ದನ್, ಮೀರಾ, ಹೇಮಲತಾ, ಅನ್ನಪೂರ್ಣ, ಪ್ರಶಾಂತ್ ಹಾಗೂ ಸತ್ಯಾ ಭಾಗವಹಿಸಿದ್ದರು.
Next Story