ಬಾವಿಗೆ ಬಿದ್ದು ಕಾರ್ಮಿಕ ಮೃತ್ಯು
ಬ್ರಹ್ಮಾವರ, ಜೂ.7: ಬಾವಿಗೆ ಕಲ್ಲು ಕಟ್ಟುವ ಕೆಲಸ ಮಾಡುತ್ತಿದ್ದ ಕಾರ್ಮಿಕ ರೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜೂ.6ರಂದು ಮಧ್ಯಾಹ್ನ 12:30ರ ಸುಮಾರಿಗೆ ಸಾಲಿಕೇರಿ ಎಂಬಲ್ಲಿ ನಡೆದಿದೆ.
ಮೃತರನ್ನು ಕೋಟತಟ್ಟು ಪಡುಕೆರೆಯ ಖಾದರ್ ಬ್ಯಾರಿಯ ಮಗ ಅಬ್ಬಾಸ್ (40) ಎಂದು ಗುರುತಿಸಲಾಗಿದೆ. ಇವರು ಇತರ ಕಾರ್ಮಿಕರೊಂದಿಗೆ ಸಾಲಿಕೇರಿ ಪ್ರಕಾಶ್ ಶೆಟ್ಟಿ ಎಂಬವರ ಬಾವಿಗೆ ಶಿಲೆಕಲ್ಲು ಕಟ್ಟುವ ಕೆಲಸ ಮಾಡುತ್ತಿದ್ದರು. ಅಬ್ಬಾಸ್ ರಾಟೆಗೆ ಹಗ್ಗ ಹಾಕಿ ಭಾರವಾದ ಕಲ್ಲುಗಳನ್ನು ಇಳಿಸುತ್ತಿರುವಾಗ ರಾಟೆಯ ಪಟ್ಟಿ ತುಂಡಾಯಿತು. ಇದರಿಂದ ಅಬ್ಬಾಸ್ ಆಯತಪ್ಪಿಮುಗ್ಗರಿಸಿ ಬಾವಿಗೆ ಬಿದ್ದು ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story