ಯುವಕ ನಾಪತ್ತೆ
ಕಡಬ, ಜೂ. 16: ಪೆಲತ್ರಾಣಿ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಆದಂ (23) ಗುರುವಾರ ಮಧ್ಯಾಹ್ನ ಸ್ನೇಹಿತ ಮರ್ದಾಲ ನಿವಾಸಿ ಸಂತೋಷ್ ಎಂಬವನೊಂದಿಗೆ ತನ್ನ ಕಾರಿನಲ್ಲಿ ಹೋಗಿದ್ದು ಮುರಳಿ ಬಾರದೇ ನಾಪತ್ತೆಯಾಗಿದ್ದಾನೆ.
ಗುರುವಾರ ರಾತ್ರಿ 12ಗಂಟೆಯಾದರೂ ಆದಂ ಮನೆಗೆ ಬಾರದ ಕಾರಣ ಮನೆಯವರು ಸಂತೋಷರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆ ಸಮಯ "ಆದಂ ಪೆರಿಯಶಾಂತಿಯಲ್ಲಿ ಕಾರಿನಿಂದ ಇಳಿದಿರುವುದಾಗಿ" ಹೇಳಿದ್ದು ಆದಂ ನ ಕಾರನ್ನು ಮನೆಗೆ ತಂದು ಕೊಟ್ಟಿದ್ದಾರೆ.
ಗುರುವಾರ ಮಧ್ಯಾಹ್ನ 2ಗಂಟೆಯ ಸುಮಾರಿಗೆ ಪೆರಿಯಶಾಂತಿಯಲ್ಲಿ ಕಾರಿನಿಂದ ಇಳಿದ ಆದಂ ನಾಪತ್ತೆಯಾಗಿದ್ದು ಈ ಬಗ್ಗೆ ಆದಂ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Next Story