ಮದ್ರಸ ಪರೀಕ್ಷೆ: ಪೂಂಜಾಲಕಟ್ಟೆ ಮದ್ರಸ ಉತ್ತಮ ಸಾಧನೆ
ಬೆಳ್ತಂಗಡಿ, ಜೂ.20: ಎಸ್ಕೆಐಎಂವಿ ಬೋರ್ಡ್ ಅಧೀನದಲ್ಲಿ ಇತ್ತೀಚೆಗೆ ನಡೆದ ಮದ್ರಸ ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಪುಂಜಾಲಕಟ್ಟೆ ರೌಳತುಲ್ ಉಲೂಂ ಮದ್ರಸದ ವಿದ್ಯಾರ್ಥಿ ಮುಹಮ್ಮದ್ ಅರ್ಶದ್ ಬೆಳ್ತಂಗಡಿ ರೇಂಜ್ಗೆ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ ಆರನೆ ರ್ಯಾಂಕ್ ಗಳಿಸಿದ್ದಾರೆ. ಐದನೆಯ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಸಫಿಯ ರುಶ್ದಾ ಬೆಳ್ತಂಗಡಿ ರೇಂಜ್ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story