ಶೋಭಾಗೆ ತಾಕತ್ತಿದ್ದರೆ ರಮಾನಾಥ ರೈ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ: ಶಾಲೆಟ್ ಪಿಂಟೊ ಸವಾಲು
ಮಂಗಳೂರು, ಜೂ.20: ಸಚಿವ ರಮಾನಾಥ ರೈಯವರು ಜಾತ್ಯಾತೀತ ವ್ಯಕ್ತಿಯಾಗಿದ್ದು, ಎಸ್ಪಿಯವರಿಗೆ ಸಲಹೆ ನೀಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಜಿಲ್ಲೆಯಲ್ಲಿ ಮತೀಯವಾದಿಗಳು ಕೋಮುಗಲಭೆ ನಡೆಸುವ ಹುನ್ನಾರ ನಡೆಸಲು ಯತ್ನಿಸುತ್ತಿದ್ದು, ಇದನ್ನು ತಡೆಯುವ ಸಲುವಾಗಿ ಸಚಿವರು ಎಸ್ಪಿಗೆ ಸಲಹೆ ನೀಡಿದ್ದಾರೆ ಎಂದು ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಹೇಳಿದರು.
ಕದ್ರಿ ಮಲ್ಲಿಕಟ್ಟೆಯ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಎಲ್ಲಿದ್ದಾರೆ ಎಂದು ಅಲ್ಲಿನ ಮತದಾರರು ಹುಡುಕುತ್ತಿದ್ದಾರೆ. ತಮ್ಮ ಕ್ಷೇತ್ರದಿಂದಲೇ ಮಾಯವಾಗಿರುವ ಶೋಭಾ ಇಲ್ಲಿಗೆ ಬಂದು ರಮಾನಾಥ ರೈಯವರನ್ನು ಟೀಕಿಸುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ರಮಾನಾಥ ರೈ ವಿರುದ್ಧ ಸ್ಪರ್ಧಿಸಿ ಜಯಿಸಲಿ ಎಂದು ಸವಾಲು ಹಾಕಿದರು.
Next Story