ಮೂಡುಬಿದಿರೆ: ಕಾರ್ಪೊರೇಶನ್ ಬ್ಯಾಂಕ್ ಶಾಖೆಯ ಹಿರಿಯ ಪ್ರಬಂಧಕನಿಗೆ ಬೀಳ್ಕೊಡುಗೆ
ಮೂಡುಬಿದಿರೆ, ಜು. 4: ಎರಡೂವರೆ ವರ್ಷದಿಂದ ಮೂಡುಬಿದಿರೆ ಕಾರ್ಪೊರೇಶನ್ ಬ್ಯಾಂಕ್ ಶಾಖೆಯಲ್ಲಿ ಹಿರಿಯ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದ ಸದಾನಂದ ಶೆಟ್ಟಿ ಭಡ್ತಿ ಹೊಂದಿ ಮುಖ್ಯ ಪ್ರಬಂಧಕರಾಗಿ ದಾವಣಗೆರೆಗೆ ವರ್ಗಾವಣೆಗೊಂಡಿದ್ದು; ಮಂಗಳವಾರ ಅವರಿಗೆ ಶಾಖೆಯ ಸಿಬ್ಬಂದಿಗಳು ಮತ್ತು ಗ್ರಾಹಕರು ಸೇರಿ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಶಾಖೆಯ ಅಭಿವೃದ್ಧಿಗಾಗಿ ಗ್ರಾಹಕರ ಮತ್ತು ಸಿಬ್ಬಂದಿ ವರ್ಗದ ಸಹಕಾರ ಪಡೆದುಕೊಂಡು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇನೆ ಎಂದರು. ಪ್ರಮುಖ ಗ್ರಾಹಕರಾದ ಪ್ರಭಾತ್ ಚಂದ್ರ ಜೈನ್, ಚೇತನ್ ವರ್ಮಾ, ರವೀಂದ್ರ ಪೈ, ರಾಮದಾಸ ಪೈ, ಗಿರೀಶ್ ಪೂಜಾರಿ, ವಿಶ್ವಾಸ್ ಜೈನ್, ವಿಕಾಸ್ ಜೈನ್, ಅಶೋಕ್ ಮಲ್ಯ, ದಯಾನಂದ ಭಟ್, ಪ್ರತಾಪ್ ಕುಮಾರ್, ಗಣೇಶ್ ಕಾಮತ್ ಉಪಸ್ಥಿತರಿದ್ದರು.
ಬ್ಯಾಂಕ್ ಅಧಿಕಾರಿಗಳಾದ ಯಶವಂತ್ ಸ್ವಾಗತಿಸಿ, ವೆಂಕಟರಮಣ ವಂದಿಸಿದರು. ಚಂದ್ರಕಾಂತ ಭಟ್ ನಿರೂಪಿಸಿದರು. ಶಾಖೆಯ ನೂತನ ಪ್ರಬಂಧಕರಾಗಿ ಹಿರಿಯ ಪ್ರಬಂಧಕ ಉದಯಕುಮಾರ್ ಎಸ್.ಎನ್. ಅಧಿಕಾರ ವಹಿಸಿಕೊಂಡಿದ್ದಾರೆ.