ಪಂಪ್ ವೆಲ್ ಮಸ್ಜಿದುತ್ತಖ್ವಾಗೆ ಭೇಟಿ ನೀಡಿದ ಕೆ.ಸಿ. ವೇಣುಗೋಪಾಲ್
ಮಂಗಳೂರು, ಜು.7: ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನಗರದ ಪಂಪ್ ವೆಲ್ ನ ಮಸ್ಜಿದುತ್ತಖ್ವಾಗೆ ಭೇಟಿ ನೀಡಿದರು.
ಈ ಸಂದರ್ಭ ತಖ್ವಾ ಮಸೀದಿ ಅಧ್ಯಕ್ಷ ವೈ. ಅಬ್ದುಲ್ಲಾ ಕುಂಞಿ ಹಾಜಿ, ಮಸೀದಿಯ ಮುತವಲ್ಲಿ ಹಾಗೂ ಖಜಾಂಚಿ ಎಸ್.ಎಂ. ರಶೀದ್ ಹಾಜಿ, ಉಪಾಧ್ಯಕ್ಷ ಯು.ಕೆ ಮೋನು, ಕಾರ್ಯದರ್ಶಿ ಬಿ.ಎಂ. ಮುಮ್ತಾಝ್ ಅಲಿ, ಜೊತೆ ಕಾರ್ಯದರ್ಶಿ ಹಮೀದ್ ಕಂದಕ್, ಎ.ಐ.ಸಿ.ಸಿ. ಕಾರ್ಯದರ್ಶಿ ಪಿ.ಸಿ ವಿಷ್ಣುನಾಥ್, ಅರಣ್ಯ ಸಚಿವ ಬಿ. ರಮಾನಾಥ ರೈ, ಆಹಾರ ಸಚಿವ ಯು.ಟಿ ಖಾದರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್ ಲೋಬೊ, ಮೇಯರ್ ಕವಿತಾ ಸನಿಲ್, ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಂಗಳೂರು ತಾಲೂಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಸದಸ್ಯರಾದ ಎಂ.ಎಸ್. ಮುಹಮ್ಮದ್, ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಎನ್.ಎಸ್ ಕರೀಂ ಉಪಸ್ಥಿತರಿದ್ದರು.
Next Story